ಸ್ಪೂರ್ತಿ ಗಿರೀಶ್ ಕವಿತೆ – ಬುದ್ದನಾಗಿದ್ದರೇ….

ಸ್ಪೂರ್ತಿ ಗಿರೀಶ್

ಸಂಕಟ ಮೈಮೀರಿ ಕೈಮೀರಿ
ಜಗತ್ತು ಹೊತ್ತಿ ಉರಿಯುವಾಗ
ಯಾವುದೊಂದು ಹೂವು
ಹಕ್ಕಿ ಮಿಗ ಹೆಮ್ಮರ ಏನಾದರೂ ಆಗಬಹುದಿತ್ತು
ಮನುಷ್ಯನಾಗಿ ಹುಟ್ಟಿರದಿದ್ದರಷ್ಟೇ ಸಾಕಾಗಿತ್ತು

ಎಷ್ಟೋ ಸಲ ಅನಿಸಿದೆ
ಸಹಸ್ರ ರೋಗ ನರಳಾಟದಿಂದ
ಬಂದೂಕಿನ ಕ್ರೌರ್ಯದಿಂದ
ತಾಯ ಬೆನ್ನಮೇಲೆ ಆಟವಾಡುವ ಮಗು
ನರಳುವ ನಗರದಿಂದ ತಪ್ಪಿಸಿಕೊಂಡು ತೇಲುವ ಚಂದ್ರನಾಗಬೇಕಿತ್ತು

ಎಷ್ಟೋ ಸಲ ಅನಿಸಿದೆ
ಗೋಡೆಗಳನ್ನು ಬೇಲಿಗಳನ್ನು
ಕೋರ್ಟು ಕಾನೂನು ಸಂಪ್ರದಾಯಗಳ್ನು
ಆರದ ಬೆಂಕಿಯನ್ನು
ಎಂದೂ ನಿಲ್ಲದ ಗಾಲಿ ಗಡಿಯಾರವನ್ನು
ಕಂಡು ಹಿಡಿಯದಿದ್ದಾಗ
ಹಸಿ ಮಾಂಸ ಗೆಡ್ಡೆ ಗೆಣಸು ತಿನ್ನುವ ಬೆತ್ತಲಕಾಲದಲ್ಲಿ
ನಾನು ಹುಟ್ಟಬಹುದಿತ್ತು
ನಡಿ ಎಂದಾಗ ಕಂತೆ ಮುಗಿಸಿ ಮಣ್ಣಾಗಬಹುದಿತ್ತು

ಎಷ್ಟೋ ಸಲ ಅನಿಸಿದೆ
ಬುದ್ದನಾಗಿದ್ದರೆ ಯಾವುದಕ್ಕೂ ಬದ್ದಳಾಗದೇ
ಕೇವಲ ನನ್ನ ಬದುಕನ್ನೇ
ಬದುಕಬಹುದಿತ್ತು

‍ಲೇಖಕರು Admin

March 28, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: