ಸುರೇಶ ಎಲ್ ರಾಜಮಾನೆ ಹೊಸ ಕವಿತೆ – ‘ಸರಿಯೋ ತಪ್ಪೋ ಸರಿಪಡಿಸಿಕೊಳ್ಳಿ’

ಸುರೇಶ ಎಲ್ ರಾಜಮಾನೆ

**

ಒಣಗಿಹೋದ ಮರದಲ್ಲಿ

ಚಿಗುರು ನೋಡುವ ಅಸೆಗೆ

ಭಾಷೆ ಗೊತ್ತಿಲ್ಲದ

ಭಾವ ಗೊತ್ತಿಲ್ಲದ

ಬೆಂಕಿ ಹಪಹಪಿಸುವದು

ಸರಿಯೊ ತಪ್ಪೊ

ಆಸೆ ಮಾತ್ರ ಸರಿಯಾಗಿಯೇ ಇದೆ

ನೆಲಕ್ಕೆ ಉದುರಿ

ಮಣ್ಣಾಗುವ ಬಯಕೆ ಹೊಂದಿದ್ದ

ಎಲೆಗಳು ಬಿಡದೇ ಬೀಸಿದ

ಬಿರುಗಾಳಿಗೆ ಹಾರಿ

ಉರಿವ ಬೆಂಕಿಗೆ ಆಹುತಿಯಾದವು

ಸಹಜತೆ ಅನ್ನೋದು ಎಷ್ಟು

ಸರಿಯೋ ತಪ್ಪೊ

ಬೆಂಕಿ ಮಾತ್ರ ಸುಡುವುದೆ ಸರಿಯಾಗಿದೆ

ಗಾಳಿಗೆ ಅಡ್ಡಲಾಗಿ ನಿಂತ

ಎಷ್ಟೋ ಮರಗಳು

ಮುಳ್ಳಾಗಿ ಕಾಣುವದು

ಬಾಳಿನ ಕಣ್ಣು

ಹೊಂದಿರುವವರಿಗೆ ಮಾತ್ರ

ಬಾಳಿನಲಿ ತಲೆಯತ್ತಿ ನಿಲ್ಲಲು

ಬಾಗಿ ನಡೆಯುವದನ್ನು

ಹೇಳಿ ಕೊಟ್ಟಿದ್ದರೂ

ಬಾಗಿ ಬಸವಳಿಯುವದು

ಸರಿಯೋ ತಪ್ಪೊ

ಎಲ್ಲ ಸಮಯದಲ್ಲಿಯೂ ಬಾಗುವದು

ಮಹಾ ತಪ್ಪೆಂಬುದೆ ಸರಿಯಾಗಿದೆ

ಭೂಮಿಗೆ ಬಿದ್ದ ಬೀಜ

ಫಲಕೊಡುವವರೆಗೆ

ಕಾಯುವದು

ಕಾಯವನ್ನು ಕಾಯ್ದುಕೊಳ್ಳುವದು

ಕಾಯಕವೇ ಆಗಬೇಕು

ಸಹಾಯಕ್ಕಾಗಿ ಸಹಕರಿಸುವದು

ಸರಿಯೋ ತಪ್ಪೊ

ಫಲಕ್ಕಾಗಿ ಕಾಯಬೇಕೆಂಬುದು

ಸರಿಯಾಗಿಯೇ ಇದೆ

ತೊಟ್ಟಿಲು ಕಟ್ಟಲು

ಜೋಕಾಲಿ ಜೀಕಲು

ಬಳ್ಳಿಯ ತಬ್ಬಲು

ಆಸರೆಯಾಗುವ ಆಶ್ರಯದಾತ

ನರರ ನಿರಾಸಕ್ತಿಗೆ ಬಲಿಯಾಗಿ

ಒಲೆಗೆ ಉರುವಲಾಗಿ

ಉರುಳುತ್ತಿದ್ದು

ಸರಿಯೊ ತಪ್ಪೊ ಎಂದು ಯೋಚಿಸುವ

ಸಮಯವಿದಲ್ಲ

ಉಸಿರಿನ ಸಮಯವೀಗ ಕೈಮೀರಿಯಾಗಿದೆ

ಎಂಬುದು ಸರಿಯಾಗಿಯೇ ಇದೆ

‍ಲೇಖಕರು Admin MM

April 22, 2024

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. ಸಚಿನ್‌ಕುಮಾರ ಹಿರೇಮಠ

    ತುಂಬಾ ಚೆಂದ ಕವಿತೆ ಬರೆದಿದ್ದೀರಿ ಸುರೇಶ್.. ಸರಿ ತಪ್ಪು ಸರಿಪಡಿಸಿಕೊಳ್ಳದಷ್ಟು ರಭಸದಲ್ಲಿದ್ದೀವಿ ಬದುಕಿನೊಳಗೆ…

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: