ಸವಿತಾ ನಾಗಭೂಷಣ ಹೊಸ ಕವಿತೆ- ಕಾವ್ಯವೆಂದರೆ?

ಸವಿತಾ ನಾಗಭೂಷಣ

—-

ಎಲ್ಲರು ಕೇಳುವರು
ಕಾವ್ಯ ಏನೆಂದು?
ನನಗೆ ನಾನೆ ಕೇಳುವೆ
ಕಾವ್ಯ ಏನೆಂದು?
ಅಯ್ಯೋ …..
ಸಾವಿರ ಸಾವಿರ ರಚನೆಗಳು. ಎಲ್ಲೋ ಒಂದು
ಒಂದೇ ಒಂದು ಸಾವಿರದೆ
ಉಸಿರಾಡುವುದು…
ಎಂಟೆದೆಗೆ ತಪ್ಪುವುದೆ
ಸಾವಿನ ನಂಟು ?

ಕಲ್ಲ ಕಡೆದರೆ
ವಿಗ್ರಹ
ಉಸಿರಾಡಿದರೆ
ದೇವರು!
ಪ್ರಾಣ ಪ್ರತಿಷ್ಠಾಪನೆ ಆಗಿ
ಜೀವ ಸಂಚರಿಸಿದರೆ
ಕಲ್ಲೂ ದೇವರು

ಪದಗಳನೊಟ್ಟಿದರೆ
ಕಲ್ಲು ಮರಳು ಮಣ್ಣಿನ
ಕಟ್ಟಡ, ಉಪಮೆ
ಅಲಂಕಾರವು ಚಪ್ಪರ
ಚಮತ್ಕಾರವಲ್ಲವದು
ನಿಶ್ಯಬ್ದದೊಳಗಣ ಶಬ್ದವದು
ರೂಪ ಸ್ಪರ್ಶ ರಸ ಗಂಧ ಮೇಳೈಸಿ
ಪರಿಮಳಿಸಿ ಹೂವರಳಿದಂತೆ…

‍ಲೇಖಕರು avadhi

November 23, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: