ಸಮಾಧಾನ ಮಾಡಿಕೊಳ್ಳಿ…

ರೇವಣಸಿದ್ದಪ್ಪ ಜಿ ಆರ್

ಸಾವಿನ ಮನೆಯಲ್ಲಿ
ಸುಮ್ಮನೆ ಕೂತು
ಎದ್ದು ಬರಲಾಗುವುದಿಲ್ಲ.
ಬೆನ್ನ ಸವರಿ,
ತಲೆ ನೇವರಿಸಿ,
ತೀರ ಹತ್ತಿರದವರಾದರೆ
ಆಲಂಗಿಸಿ,
ಸಮಾಧಾನ ಮಾಡಿಕೊಳ್ಳಿ
ಎಂದು ಹೇಳುತ್ತೇವೆ.
ಹೇಳಿದವನಿಗೂ
ಹೇಳಿಸಿಕೊಂಡವನಿಗೂ
ಗೊತ್ತಿರುತ್ತದೆ-
ಯಾರೋ ಹೇಳಿದ ಮಾತ್ರಕ್ಕೆ
ನಿರ್ಗಮಿತ ಜೀವ
ದೇಹ ಸೇರುವುದಿಲ್ಲ;
ಸಮಾಧಾನವಾಗುವುದಿಲ್ಲ.

ಹೋದವನ
ತದ್ರೂಪಿ ಜೀವಂತ ಆಕೃತಿಯ
ತಂದು ನಿಲ್ಲಿಸಿದರೂ
ಅವನು ಇವನಾಗುವುದಿಲ್ಲ;
ಇವನು ಅವನಾಗುವುದಿಲ್ಲ.
ಇನ್ನೂ ಬದುಕಬೇಕಿರುವ
ಬದುಕಿನಲ್ಲಿ
ಇನ್ನೂ ಬಾಳಬೇಕಿರುವವರಿಗೆ
ಮಿಡಿಯುವ ಮನಗಳಿರುವುದು
ಸಮಾಧಾನ.
ಒಬ್ಬರ ಕಣ್ಣೀರಿಗೆ ಕರಗಿ,
ಒಬ್ಬರ ನಗುವಲ್ಲಿ ನಕ್ಕು,
ಒಬ್ಬರನ್ನೊಬ್ಬರು ಅನುಸರಿಸಿ,
ಮಾಮೂಲು ಜಾಡು
ಹಿಡಿಯುತ್ತೇವೆ.

ನಿನ್ನೆಗಳು ಇಂದುಗಳಲ್ಲಿ,
ಇಂದುಗಳು ನಾಳೆಗಳಲ್ಲಿ,
ನಾಳೆಗಳು ನಾಳಿದ್ದುಗಳಲ್ಲಿ
ಅಸ್ತಂಗತವಾಗಿ
ಮರುಹುಟ್ಟು ಪಡೆಯುವಾಗ
ಯಾರೋ ಯಾರಿಗೋ
ಸಮಾಧಾನ ಮಾಡಿಕೊಳ್ಳಿ
ಎಂದು ಹೇಳುತ್ತಲೇ ಇರುತ್ತಾರೆ.

‍ಲೇಖಕರು Admin

December 14, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. ಸರೋಜ ಪ್ರಶಾಂತಸ್ವಾಮಿ

    ಚೆನ್ನಾಗಿದೆ ಸರ್.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: