ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸದಾಶಿವ ದೊಡಮನಿ ಹೊಸ ಕವಿತೆ- ಎಲ್ಲಿ ಹೋದನೇ ಅವನು..?

ಡಾ ಸದಾಶಿವ ದೊಡಮನಿ

ಎದೆಗೆ ಎದೆಯ ಒತ್ತಿ ಒಳಗೆ ಬೆಂಕಿ ಹಚ್ಚಿ
ಸರಿ ರಾತ್ರಿಯವರೆಗೆ ತುಟಿಯ ಜೇನು ಹೀರಿ ಬೆಳಗಾಗುತ್ತಲೇ ಹೋದನಲ್ಲ!
ಎಲ್ಲಿ ಹೋದನೆ ಅವನು?

ಇದು ಬಂದ ಹೆಜ್ಜೆಯ ಗುರುತು!
ಹೋದ ಹೆಜ್ಜೆಯ ಗುರುತು ಎಲ್ಲೇ?
ಹೋದ ಹೆಜ್ಜೆಯ ಗುರುತೂ ಕದ್ದು ವಯ್ದನೇ?
ಎಲ್ಲಿ ಹೋದನೇ ಅವನು?

ಕಪ್ಪುಗುರುಳ ವಾಸನೆ ಜನುಮ ಮರೆಸುತ್ತಿದೆ ಎಂದವನು
ಬಾಹು ಬಂದನದಲಿ ಎಲುವನು ಪುಡಿಪುಡಿ ಮಾಡಿ
ನರನಾಡಿಯಲಿ ಬಿಸಿನೆತ್ತರ ಹರಿಸಿ ಕತ್ತಲು ಬೆಳಗು ಮಾಡಿದವನು
ಎಲ್ಲಿ ಹೋದನೇ ಅವನು?

ಸುಡುವ ಎದೆ, ಹರಿವ ಬಿಸಿ ರಕುತ ಅವನನ್ನೇ ಧ್ಯಾನಿಸುತ್ತಿದೆ
ನದಿ, ಮರ, ಗಿಳಿವಿಂಡು, ಕೋಗಿಲೆ ನಿಮ್ಮಲಿ ಒಂದು ಕೇಳುವೆ ಕಂಡಿರೇನೇ ಅವನ?
ಜನುಮ ಜನುಮಕೂ ಸಖನಾಗಿ ಇರುವೆನೆಂದವನು
ತೀರದ ಒಲವ ಉಣಬಡಿಸಿದವನು
ಕಣ್ಣ ಮುಂದೆಯೇ ಕಾಣನಾದನಲ್ಲೇ
ಎಲ್ಲಿ ಹೋದನೇ ಅವನು?
ನನ್ನ ಎದೆಗಾರನನು!!

‍ಲೇಖಕರು Admin

29 September, 2021

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading