ಸತ್ಯ…

ಡಾ ನಾ ಮೊಗಸಾಲೆ

ಭರಪೂರ್ತಿ ಒಣಗಿ ಹೋದಂತಿರುವ ಆ ಮರವು
ಯಾರನ್ನೊ ಕರೆಯುವಂತೆರಡು ಗೆಲ್ಲಿನಲ್ಲಿ
ಉಳಿಸಿಕೊಂಡಿದೆ ಜೀವ ಚಿಗುರು ಮನಸಿನ ಒಳಗೆ
ಅವಿತಿದ್ದ ಕಿಸಿರಿರುವಂತೆ ಕಣ್ಣಿನಲ್ಲಿ

ಬಂತೊಂದು ಕಾಗೆ ಆ ಸಂಜೆ, ದಾರಿತಪ್ಪಿದ ಹುಡುಗ
ಮನೆಯ ಹುಡುಕುವ ಹಾಗೆ ಒಬ್ಬಂಟಿಯಾಗಿ
ಕುಳಿತು ರೆಂಬೆಯ ಮೇಲೆ ಕೂಗಿ ಕರೆಯಿತು ಬಳಗ
ಬಂದು ಗೆಲ್ಲುಗಳರಲಿ ಬರಲಿ ನೂರಾಗಿ

ಎಷ್ಟು ಕರೆದರು ಇಲ್ಲ ಕಾಗೆಗಳ ಹಿಂಡು, ಕ್ಷಣ
ಬಿಟ್ಟು ಬಂದುವು ಎರಡು ನಾವಿರುವೆವೆನುತ
ಒಟ್ಟಾಗಿ ಕೂಗಿದವು ಬನ್ನಿರೆಲ್ಲರು ಎನುವಂತೆ
ಬಾರದುಳಿದಾಗ ಹಾರಿದುವು ಅರಸಿ ಉಳಿದವರ

ಎರಡು ದಿನಗಳ ಮೇಲೆ ಆ ಮರದ ಕೊಂಬೆಗಳ
ಮೇಲೆ ಅಲ್ಲಲ್ಲಿ ಕಂಡಿತು ಚಿಗುರು ಆಕಾಶಕೆ
ಜೀವ ಇದ್ದೂ ಒಣಗಿ ನಿಂತಂತೆ ಏಕಿತ್ತುಮರ
ವೆಂದು ತಿಳಿಯದು ನನಗೆ! ತಿಳಿದಿತ್ತೆ ಕಾಗೆಗಳಿಗೆ?

‍ಲೇಖಕರು Admin

January 18, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: