ವಲಸೆ ರೈಲು

‌‌ ಡಾ ಡಿ ಸಿ ರಾಜಪ್ಪ 

ಅಪ್ಪ ಹತ್ತಿ ಬಿಡು ರೈಲು
ಅದು ಭರ್ತಿ ಯಾಗುವ ಮುನ್ನ
ಮಹಾಮಾರಿ ಕೊರೋನಾ ಬಂದು
ಬೀದಿ ಹೆಣವಾಗುವ ಮುನ್ನ
ಸೇರಿಬಿಡು ನೀನುಟ್ಟಿದ ನೆಲವನ್ನ

ಅಣ್ಣಾ ಹತ್ತಿಬಿಡು ರೈಲು
ಅದು ಭರ್ತಿಯಾಗುವ ಮುನ್ನ
ಮರಳಿ ಮಣ್ಣಿಗೆ ಸೇರು
ಆದರ ವಾಸನೆ ಆರುವ ಮುನ್ನ

ರೀ, ಹತ್ತಿಬಿಡಿ ರೈಲು ಬೇಗ
ಕಾಣದೂರಿನಲಿ, ನಿಮ್ಮ ಬದುಕು
ಅಂತ್ಯವಾಗುವ ಮುನ್ನ
ಮಡದಿ ಮಕ್ಕಳ ಸೇರಿ ಬಿಡಿ
ನಾವೆಲ್ಲ ಸೇರಿ ಕೂಡಿ ಬಾಳೋಣ

ಅಣ್ಣಾ ನೀನು ನಮ್ಮನ್ನೆಲ್ಲಾ ಬಿಟ್ಟು
ದೂರದೂರಿಗೆ ಹೋದೆ,ನಾವಿಲ್ಲಿ
ಒಂಟಿ,ಕೊರೋನಾ ಬಂದು
ನೀ ಸತ್ತರಲ್ಲಿ,ನಿನ್ನ ಹೆಣವನ್ನೂ
ಕೊಡುವುದಿಲ್ಲವಂತೆ ನಿಜವಣ್ಣಾ

ನೀ ಬೀದಿ ಹೆಣವಾಗುವ ಮುನ್ನ
ಮರಳಿ ಮಣ್ಣಿಗೆ ಬಾ ಅಣ್ಣಾ
ನಾವೆಲ್ಲಾ ಸೇರಿ ಕೂಡಿ ಬಾಳೋಣ

‍ಲೇಖಕರು nalike

May 24, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. ಚಂದ್ರಪ್ರಭ ಕಠಾರಿ

    ಕವನ ಚೆನ್ನಾಗಿದೆ. ವಲಸಿಗರು ಕೊರೊನಾ ಕಾಲದಲ್ಲಿ ಯಾರೂ ಗಮನ ಹರಿಸದ, ತಮ್ಮದಲ್ಲದ ತಪ್ಪಿಗೆ ಆಳುವ ಪ್ರಭುತ್ವದ ಲಾಠಿ ಏಟಿನಲಿ ಬದುಕು ಮೂರಾಬಟ್ಟೆಯಾಗಿಸಿಕೊಂಡವರು.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: