ವತ್ಸಲಾ ಶ್ರೀಶ – ಗಝಲ್…

ವತ್ಸಲಾ ಶ್ರೀಶ

ಒಲವಿನ ಸೌಧದ ನಲಿವಿನ ಕೋಣೆಗೆ ಬೀಗ ಜಡಿಯುವ ಮುನ್ನ ಕಣ್ಣಲ್ಲಿ ಕಣ್ಣನಿಡಬೇಕಾಗಿತ್ತು ನೀನು
ಕನಸ ತೇರಿನ ಗಾಲಿಯ ಕೀಲಿಯನು ತೆಗೆಯುವ ಮುನ್ನ ಕಣ್ಣಲ್ಲಿ ಕಣ್ಣನಿಡಬೇಕಾಗಿತ್ತು ನೀನು

ಹುಣ್ಣಿಮೆಯ ರಾತ್ರಿಯಲಿ ಚಂದ್ರ ತಾರೆಯರ ಏಕಾಂತಕ್ಕೆ ಅಡ್ಡಿಪಡಿಸಿದ ಸಂಭ್ರಮ ಹೇಗೆ ಮರೆಯಲಿ
ಪ್ರೇಮ ಸಂಪುಟದಿ ಅಮಾವಾಸ್ಯೆಯ ಪುಟ ತೆರೆಯುವ ಮುನ್ನ ಕಣ್ಣಲ್ಲಿ ಕಣ್ಣನಿಡಬೇಕಾಗಿತ್ತು ನೀನು

ತಂಗಾಳಿಯೂ ಮುನಿಸುಗೊಂಡು ಹಾದಿ ಬದಲಿಸಿದ ದಿನ ನಿಟ್ಟುಸಿರುಗಳ ರಾಶಿಯಲಿ ಹುದುಗಿ ಹೋಗಿದ್ದೆ
ಹೃದಯದ ಗಾಯಕೆ ಸವಿನೆನಪುಗಳ ಕಾಡಲು ಬಿಟ್ಟು ನಡೆಯುವ ಮುನ್ನ ಕಣ್ಣಲ್ಲಿ ಕಣ್ಣನಿಡಬೇಕಾಗಿತ್ತು ನೀನು

ಜೇನ ಸವರಿ ಉಣಿಸಿದ ವಿಷಕ್ಕೇನು ಗೊತ್ತು ಹೇಳು ತನ್ನ ಗುಣವನ್ನು ನಿಷ್ಠೆಯಿಂದ ತೋರಿಸಿದೆ
ಆತ್ಮಸಾಕ್ಷಿಯನೂ ಗದರಿಸಿ ಸಂಕೋಲೆ ಬಿಗಿಯುವ ಮುನ್ನ ಕಣ್ಣಲ್ಲಿ ಕಣ್ಣನಿರಿಸಬೇಕಾಗಿತ್ತು ನೀನು

ಮನದ ಬಯಲಿನ ತುಂಬಾ ಪ್ರೀತಿ ಗಿಡಗಳನೇ ಬೆಳೆಸಿದ ‘ತಪಸ್ಯಾ’ಳಿಗೆ ಮೋಸ ವೃಕ್ಷದ ಪರಿಚಯವಿರಲಿಲ್ಲ
ಮುಗ್ಧತೆಯ ಹೊಸ್ತಿಲಲಿ ಕರಿ ರಂಗೋಲಿ ಬಿಡಿಸುವ ಮುನ್ನ ಕಣ್ಣಲ್ಲಿ ಕಣ್ಣನಿರಿಸಬೇಕಾಗಿತ್ತು ನೀನು

‍ಲೇಖಕರು Admin

October 17, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. ಲೋಕನಾಥ್ ಅಮಚೂರು.

    ವತ್ಸಲಾಶ್ರಿಶರವರ ಕವಿತೆ ಚೆನ್ನಾಗಿ ಮೂಡಿ ಬಂದಿವೆ. ಕಣ್ಣಲ್ಲಿ ಕಣ್ಣಿಟ್ಟು ನೋಡಿದಾಗ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: