ಸದಾಶಿವ ದೊಡಮನಿ ಹೊಸ ಕವಿತೆ- ಇರುಳ ಬಾಗಿಲಿಗೆ…

ಇರುಳ ಬಾಗಿಲಿಗೆ ಕಣ್ಣ ದೀಪಗಳನ್ನಿಟ್ಟು..

ಸದಾಶಿವ ದೊಡಮನಿ

ನೀನು ಮತ್ತೆ ಸಿಕ್ಕೇ ಸಿಗುವೆ
ಎಂಬ ಭರವಸೆಯ ಬೆಳಕಿನಲಿ
ಕನಸು ಹೆರುತ್ತಿದ್ದೇನೆ
ಹುಡುಗಾಟಿಗೆಗೂ ಹುಸಿಯ ನುಡಿಯದಿರು
ಹಗ್ಗವೂ ಹಾವಾಗುವುದು!

ದಿಬ್ಬಣದ ಸಂಭ್ರಮ
ಹೃದಯ ಗೂಡಲಿ ಮನೆ ಮಾಡಿ
ಇರುಳ ಬಾಗಿಲಿಗೆ ಕಣ್ಣ ದೀಪಗಳನ್ನಿಟ್ಟು
ಕಾಯುತ್ತಿದ್ದೇನೆ
ಒಲವ ಗಂಧ ಗಾಳಿಯಲಿ ಹೃದಯ ಬೆರೆಸಲು!

ಒಲವು ಹುಚ್ಚು ಹೊಳೆಯೆಂದು
ದೂಡದಿರು, ಧೂಳಿನಲಿ
ಹಾಳು ಬಿದ್ದ ಎದೆಯ ದೇಗುಲಕ್ಕೊಮ್ಮೆ
ಎದೆಗೊಟ್ಟು ಕೇಳು, ನಿನ್ನ ಸ್ಮರಣೆಯ ಹೊರತು
ಅನ್ಯ ಸೊಲ್ಲು ಇಲ್ಲಿ ಕೇಳದು

ಹಸಿಯ ಗಾಯದ ರಸಿಕೆ
ಹೆಸರಿಡಿದು ಕರೆಯುತ್ತಿದೆ
ಓ ಎನ್ನದೆ ಹೋಗದಿರು ಒಲವೆ!
ಚೆಲುವಿಗೆ ಒಲವೇ ಆಭರಣ
ಬಿಂಕ, ಬಿಗುವೆಂಬುದು ಹುಲು ಸರವಿ

‍ಲೇಖಕರು Admin

October 17, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: