ರೈತರಿಗೆ ಸಂದ ಜಯದ ಸಂದರ್ಭದಲ್ಲಿ…

ಸವಿತಾ ನಾಗಭೂಷಣ ಹೊಸ ಕವಿತೆ- ಊಟದ ತಾಟಿನಲ್ಲಿ

ಸವಿತಾ ನಾಗಭೂಷಣ

ಚಿತ್ರ: ಹಜರತ್ ಅಲೀ

ಮಿಡಿ ಉಪ್ಪಿನ ಕಾಯಿ, ಹೆಸರುಬೇಳೆ, ಸೌತೆಕಾಯಿ ಲಿಂಬೆ,
ತೆಂಗು, ಸಾಸಿವೆ, ಕರಿಬೇವು ಹಸಿ ಮೆಣಸು ಹಾಕಿದ ಘಮ್ಮನೆ ಪರಿಮಳ ಸೂಸುವ ಕೋಸಂಬರಿ.

ಹುರುಳಿ ಕಾಯಿಯ ಪಲ್ಯ,
ಬೆಂಡೆಕಾಯಿ ಗೊಜ್ಜು.
ಬದನೆ ನೀರುಳ್ಳಿ ಆಲೂ ಹಾಕಿದ ಸಾಂಬಾರು- ಅದರಲ್ಲಿ ಉದ್ದು, ಕಡಲೆ, ಕೊತ್ತಂಬರಿ ಬೀಜ, ಮೆಣಸು, ಮೆಂತೆ, ಒಣಮೆಣಸು, ಕೊಬ್ಬರಿ ಹುರಿದು ಹಾಕಿದ ಪುಡಿಯ ಘಮ!
ಬೆಳ್ಳುಳಿ ಒಗ್ಗರಣೆ ಹಾಕಿರುವ ಹುಣಿಸೆ ಸಾರು

ಬೆಲ್ಲ, ತೆಂಗು, ದ್ರಾಕ್ಷಿ, ಏಲಕ್ಕಿ,
ತುಪ್ಪದ ಗೋಧಿಯ ಹುಗ್ಗಿ
ಹಾಲಿನ ಕೀರು

ಕೊತ್ತಂಬರಿ ಸೊಪ್ಪು-
ಹಸಿ ಶುಂಠಿ ಬೆರೆಸಿದ ಮಜ್ಜಿಗೆ

ಮಲ್ಲಿಗೆ ಹೂವಿನಂತಹ ಅನ್ನ
ಜೋಳದ ರೊಟ್ಟಿ-ತುಂಡು ಹಸಿ ನೀರುಳ್ಳಿಯಲ್ಲೂ
ರಾಗಿಯ ಮುದ್ದೆ- ಉಪ್ಪೆಸರಿನಲ್ಲೂ…
ಗೋಧಿಯ ರೊಟ್ಟಿ- ದಾಲ್ ನಲ್ಲೂ…

ಬಾಡೂಟ, ಬಿರಿಯಾನಿ…
ಭೂರಿ ಭೋಜನದಲ್ಲೂ…
ಉಪ್ಪು-ಗಂಜಿ-ಉಪ್ಪಿನಕಾಯಲ್ಲೂ
ಒಂದೊಂದು ಅಗುಳಿನಲ್ಲೂ ನೀನೇ ಇರುವೆ

ಊಟದ ತಾಟಿನ ತುಂಬಾ
ನೀನೇ ಕಾಣುವೆ !
ಓ ರೈತನೇ ಮೊದಲ ತುತ್ತು ನಿನಗೇ ಅರ್ಪಣೆ

‍ಲೇಖಕರು Admin

November 19, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: