ರೇಖಾ ರಂಗನಾಥ ಕವಿತೆ – ಋತು…

ರೇಖಾ ರಂಗನಾಥ 

ನೋಡು! ನಾವಿಬ್ಬರೇ
ಹೆಜ್ಜೆಯೂರಿದ ಹಾದಿ
ಹಗಲು ಸುರಿ ಸುರಿದು
ನೀಲಿ ಅಂಗಳದ ತುಂಬೆಲ್ಲ
ಮಗ್ಗಲು ಮಗ್ಗಲು ಬೆಳೆದ
ಗಿಡ ಗಂಟಿ ಹೀಚು ಹೂವು ಹಣ್ಣು
ತೂಗಿ ತೊನೆವ ರಂಬೆ ಕೊಂಬೆ
ಉಸಿರಾದ ಹಸಿರಿತ್ತು!

ತಿಮಿರು ಸೀಳದ ಹಗಲು
ಜಿನಗುವ ಮಳೆ ಹನಿ
ನಡು ಹಾದಿಯಲಿ ಅಡ್ಡಲಾಗಿ
ಹಾದು ಹೋದ ಕಾಡು ಮೃಗಗಳ
ಪಾದ ಗುರುತುಗಳು
ಹೆಜ್ಜೆ ಹಾಕದೆ ದಣಿವಾರಿಸಬೇಕಿತ್ತೇನೋ?

ನೋಡು! ಹೇಗೆ!?
ಅಬ್ಬರಿಸಿದ ಸಿಡಿಲಿಗೆ
ನೀರೆರದ ವೃಕ್ಷವೊಂದು
ಬೆಂಕಿ ತಗುಲಿಸಿಕೊಂಡಿದೆ
ನೆಲ ಕಚ್ಚಿದ ಹೂವು ಹಣ್ಣು ಗೊಂಚಲು
ಮರಣ ಶಯನಕೆ
ಪಾದದಡಿ ಶರಣಾಗಿವೆ

ತೂರಿದ ಸುಂಟರಗಾಳಿ ಕೊಚ್ಚಿ ಹೋಯ್ದ ಮಳೆ
ಕದಡಿದ ಕೆಂಪು ನೀರಲಿ
ಕೆರೆ ಕಟ್ಟೆಯೊಂದು ಆರ್ಭಟಿಸುತಿದೆ
ಆ ಹಾದಿ ಆ ಗುಡಿಸಲು
ದೇವನ ಜಗುಲಿ ತಲುಪಿದ
ಬೊಗಸೆ ಹೂವು ಹಣ್ಣು
ತಳದ ಕೆರೆಯಲಿ ಕಳೇಬರ ಗೀಚುತಿವೆ.

ಈಗ ದಂಡೆಯ ಮೇಲೊಬ್ಬ ಕಾವಲುಗಾರನಿದ್ದಾನೆ
ಬಂಡೆ ಕೊರಕಲಿನ ಗೀಚು ಗಾಯಗಳಿರದಂತೆ
ಕೆಂಪು ನೀರು ತಿಳಿಗೊಂಡಿದೆ
ಕೊನರದ ಕೊರಡಿನಾಚೆಗೂ
ಚಿಗುರೊಡೆದು ಹಸಿರು
ಕೂತ ಹಕ್ಕಿ ಪಿಕ್ಕಿಗಳು
ದಣಿದ ಹಾದಿಕೋರರಿಗೆ ಜೀವರಸವಾಗಿ
ಕೆರೆ ತನ್ನೆಡೆ ಬಂದವರ ತಣಿಸುತಿದೆ
ಇದೆ ನೋಡು ಋತುವಿನಾಟ!

‍ಲೇಖಕರು Admin

May 21, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: