ರಂಗಸ್ವಾಮಿ ಮಾರ್ಲಬಂಡಿ ಕವಿತೆ- ಜಂಜಾಟದ ಮನಸು…

ರಂಗಸ್ವಾಮಿ ಮಾರ್ಲಬಂಡಿ

ಬೀಜದೋಳ್ ಅಡಗಿರ್ಧ ಮರಕ್ಕೆ
ತಾನುಂಟ ಅಸ್ಥಿತ್ವ ಗೊತ್ತಿರುವುದೇ..
ಸಾಗರದೋಳ್ ತೇಲಾಡುವ ತೆಪ್ಪೆಗೆ
ತಾನ್ ಸಾಗರದ ಫಲ ಎಂದು ಗೊತ್ತಿಹುದೇ…?

ನಾ ತಂದೆ ತಾಯಿಯ ಫಲವೇನೊ…!
ಆದರೆ ಕಳೆದುಹೋದ ಅದೆಷ್ಟೊ ಶುಕ್ರಕಣಗಳಲಿ ನಾ ಎಷ್ಟೆನೆಯವನು…?
ಬಲವಂತದ ಜನ್ಮದಲ್ಲಿ
ನೆನಪುಗಳ ಪಯಣದಲ್ಲಿ
ಕನಸುಗಳ ಭೇಟೆಯಲಿ
ಹೆಸರಿಡದ ಆಸೆ ಮಾತ್ರ ಸುಳ್ಳಲ್ಲ…!

ನೀ ಜೀವ…!
ನೀನೆ ಜೀವನ…!
ಎಂಬ ನರ್ತನೆಯ ಮಾತು ಬೇಡ….!
ಕಂಡ ಕನಸಲ್ಲಿ,
ಕಾಡಿದ ನೆನಪಿನಲಿ,
ನಿನ್ನ ತಕ್ಕಡಿ ಮಾತ್ರ ಕೆಳಗಿಲ್ಲ…!

ಸಮಾನವಲ್ಲ…
ಸಮಾಜದಲ್ಲ….!
ನೀ ಬಣ್ಣಿಸುವ ನೆಪ ಮನದಲಿಲ್ಲ…..!
ನಿನ್ನ ಮನದಲ್ಲಿ ಹರಿದಾಡುತ್ತಿರುವ ಆ ನನ್ನ ಪ್ರತಿಬಿಂಬವೇ ನಿನ್ನ ಜೀವಂತಿಕೆಯ ಸಾಕ್ಷಿ …..!
ಮರೆತಿದ್ದೇನೆ ಎಂದು ನೆಪ ಹೇಳಿ ಮರವಾಗುವ ಮುಂಚೆಯೇ ಮರಣದಲ್ಲಿ ಮಾರ್ಧ್ವನಿಸಬೇಡ ಗೆಳತಿ….

‍ಲೇಖಕರು Admin

November 9, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: