ಕನ್ನಡಕ್ಕೆ ಯೂನಿಕೋಡ್ ಬೇಕು ಎನ್ನುವ ದನಿಯನ್ನು ಜೀವಂತವಾಗಿಟ್ಟವರು ಚಂದ್ರಶೇಖರ ಕಂಬಾರರು
ಆ ಬಗ್ಗೆ ಅವರ ನಿಲುವು ಯಾವಾಗಲೂ ಸ್ಪಷ್ಟ
ಕನ್ನಡ ಭಾಷೆಯ ಬೆಳವಣಿಗೆಗಾಗಿ ಯೂನಿಕೋಡ್ ತಂತ್ರಜ್ಞಾನ ಹೆಚ್ಚು ಬಳಕೆಯಾಗಬೇಕು.
ತಂತ್ರಜ್ಞಾನ ಮುಂದುವರೆದಂತೆ ಪ್ರಾದೇಶಿಕ ಭಾಷೆಗಳ ತಂತ್ರಾಂಶಗಳ ಬಳಕೆ ಕೂಡ ಹೆಚ್ಚಾಗುತ್ತಿದೆ.
ನೆರೆಯ ತಮಿಳುನಾಡಿನಲ್ಲಿ ತಂತ್ರಾಂಶ ಬಳಕೆಗೆ ಹೆಚ್ಚು ಒತ್ತು ನೀಡಲಾಗಿದೆ.
ಹಾಗೆಯೇ, ಅಲ್ಲಿನ ಜನ ಮಾತೃ ಭಾಷೆಯಲ್ಲೇ ವ್ಯವಹಾರ ಮತ್ತು ದಿನನಿತ್ಯದ ಚಟುವಟಿಕೆಗಳನ್ನು ನಡೆಸುತ್ತಾರೆ.
ಹೀಗಾಗಿ, ಕನ್ನಡ ಭಾಷಾ ಬೆಳವಣಿಗೆಗೂ ಯೂನಿಕೋಡ್ ತಂತ್ರಾಂಶ ಹೆಚ್ಚು ಬಳಕೆಯಾಗಬೇಕು.
ಅಲ್ಲದೇ, ಇತರೆ ತಂತ್ರಜ್ಞಾನಗಳು ಸಹ ಕನ್ನಡ ಭಾಷೆಗೆ ಕೊಡುಗೆ ನೀಡುವಂತಾಗಬೇಕು.
– ಚಂದ್ರಶೇಖರ ಕಂಬಾರ
0 ಪ್ರತಿಕ್ರಿಯೆಗಳು