ಮಹಾಂತೇಶ ಪಾಟೀಲ
1.
ನಿನ್ನೆಯಷ್ಟೇ ಅವನ
ಮದುವೆಯಾಯಿತು.
ಉಳಿದ್ದ ಬಿತ್ತಿದ್ದ
ಪಾದ ಸ್ಪರ್ಶಿಸುತ್ತಲೆ
ಹೊಲವನೆಲ್ಲ ಸುತ್ತಿದ್ದ.
ಮಳೆ ಬಾರದ ಕಾಲಕೆ
ಗಿಡಗಿಡಕ್ಕೆ ಕೂತು ಕಣ್ಣೀರ ಮಳೆಗರೆದು
ಮೈಯೆಲ್ಲ ಮೂಡಿ ಹಸಿರಾಗಿದ್ದ.
ನನ್ನ ರೆಂಬೆಕೊಂಬೆಗಳಲಿ
ಸುಳಿದಾಡುತ್ತ; ಹೂ ಬಿರಿವ ಕಾಲಕ್ಕೆ
ಹಣ್ಣಿನ ಲೆಕ್ಕಹಾಕಿದ್ದ.
2.
ಈ ಹುಡುಗರೇ ಹೀಗೆ
ಮೈಯೆಲ್ಲ ಹಸಿರು ಮೂಡಿಸಿ
ಹೊರಟು ಬಿಡವರು.
ತಾನೇ ಬೆಳೆದ ಹೂವನು
ತಾವೇ ಸವಿಯಬೇಕೆಂದ ಹಣ್ಣನ್ನು
ಯಾರದೋ ಕೈಗಿರಿಸಿ.
ತ್ಯಾಗದ ತೊಟ್ಟಿಲಲ್ಲಿ
ಪ್ರೀತಿಯ ಹೆಣವನ್ನಿಟ್ಟು ತಿರುಗುವುದು
ಈ ಹುಡುಗರಿಗೊಂದು ಖಯಾಲೆ.
3.
ಅದೇನು ಮಧುಮಗನೋ…?
ಮಿಥುನಕ್ಕೆ ಮೈದೆರೆದರೆ
ಐಟಂ ಸಾಂಗ್ ಕೇಳುತ್ತ ನಿದ್ದೆಯಲಿ ಒದ್ದೆಯಾಗುವ.
ನೂರಂಕದ ಹುಡುಗನಂತೆ
ಸೊನ್ನೆ ಸುತ್ತಿರುವನು
ಶಯ್ಯಾಗ್ರಹದ ಸುರತ ಸೋಪಾನದಲಿ
ಶ್ರೀದೇವಿ ಯವರ ಗಜಲ್ ಅರ್ಥಪೂರ್ಣವಾಗಿದೆ