ಅವಳು
ಲಕ್ಷ್ಮಿ ವಾರಣಾಶಿ ಅಡ್ಕತಿಮಾರ್
ಅವಳು ನಿಲ್ಲಲಿಲ್ಲ
ದಾರಿ ಉದ್ದಕೂ ಸಾಗಿ
ಸಾಲು ದೀಪಗಳ ಸೇರಿ
ಸೋಲುಗಳ ಸರಮಾಲೆಗೆ
ಬೀಗ ಜಡಿದು
ಗಾಳಿಯಲಿ ಲೀನವಾದಳು.
ಅವಳ ಮಾತು ಯಾರನೂ ಮುಟ್ಟಲಿಲ್ಲ!
ಮೌನದ ಮರವೇರಿ
ಶಬ್ದ ಸಾಗರ ದಾಟಿ
ಅಲೆಗಳೊಡನೆ ಸೇರಿ
ಅಳಿಸಿ ಹೋದಳು.
ಅವಳು ಅವನಲ್ಲ
ಅವನಾಗ ಬಯಸಿದಳೆ ?!!
ಬಯಕೆ ಬಾಯಾರಿಕೆಗಳು
ಬತ್ತಿ ಹೋದನಂತರವೂ
ಮತ್ತಲ್ಲಿ ಉರಿಯುತಾಳೆ
ಕೆಂಡದಂತೆ… !
0 ಪ್ರತಿಕ್ರಿಯೆಗಳು