ಹೆಚ್.ಆರ್. ಸುಜಾತಾ ಅವರು ಈಗಾಗಲೇ ‘ನೀಲಿ ಮೂಗಿನ ನತ್ತು’ ಕೃತಿಯ ಮೂಲಕ ಅವರ ಗದ್ಯ ಬರಹದ ಗಾಢ ಮತ್ತು ವಿಶಾಲವಾದ ಅನುಭವ, ಭಾಷೆ, ಭಾವಗಳ ಹಲವು ವಿನ್ಯಾಸದ ಕಥಾನಕಗಳನ್ನು ಓದುಗರ ಮುಂದಿರಿಸಿ ಸೂರೆಗೊಂಡಿದ್ದಾರೆ. ಅಂತಹದ್ದೇ ಅನಿಸುವ ಆದ್ರೆ ಅದಲ್ಲದ ಮತ್ತೊಂದು ಹೊರಳಿನ ಕಥಾನಕವಾಗಿ ‘ಮಣಿಬಾಲೆ’ ಕೃತಿಯು ಮೂಡಿ ಬಂದಿದೆ. ಸುದೀರ್ಘ ಐದುನೂರು ಪುಟಗಳ ಈ ಕೃತಿಯು ಓದುಗನನ್ನ ಐವತ್ತು ವರುಷಗಳ ಹಿಂದಿನ ಬದುಕಿನ ಚಿತ್ರಣಕ್ಕೆ ಜಾರಿಸಿ ವರ್ತಮಾನದ ದುಗುಡಗಳೊಂದಿಗೆ ನಮ್ಮನ್ನು ಎದುರಾಗಿಸುತ್ತದೆ. ಒಳನಾಡಿನ ಆಡುಗನ್ನಡ ನುಡಿಯ ವೈಭವವು ಈ ಕೃತಿಯನ್ನ ಅಲಂಕರಿಸಿಕೊಂಡಿದೆ.
-ಸಂಕಥನ
ಕೃತಿಯ ಕುರಿತಾಗಿ ಓದುಗರ ಸಂವಾದವು ಇದೇ ಭಾನುವಾರ ಸಂಜೆ ಬೆಂಗಳೂರಿನಲ್ಲಿ ನಡೆಯಲಿದೆ.
ಆಸಕ್ತರು ತಪ್ಪದೇ ಭಾಗವಹಿಸಿರಿ.
-ಹೆಚ್.ಆರ್. ಸುಜಾತಾ
ದಿನಾಂಕ: ಭಾನುವಾರ, 20.11.2022
ಸಮಯ: ಸಂಜೆ, 5.00 ಗಂಟೆಗೆಜೆ.
ಸ್ಥಳ : ನಮ್ಮ ಮನೆ
0 ಪ್ರತಿಕ್ರಿಯೆಗಳು