ಬಾ ಇಲ್ಲಿ ಸಂಭವಿಸು..

ನಳಿನಾ ಪ್ರಸಾದ್

ಬಾ ಇಲ್ಲಿ ಸಂಭವಿಸು
ನನ್ನೊಳಗಣ ದೃಷ್ಟಿ ನನಗೆ ಎಟುಕುವ ವರೆಗು
ನಿನ್ನ ಸೃಷ್ಟಿ ಸೋಜಿಗವು ಮನವ ಆವರಿಸುವವರೆಗೂ..
ಹಗಲಿಗೆ ಹೆಗಲಾಗಿ
ಇರುಳಿಗೆ ಕರುಳಾಗಿ
ಬದುಕಿಗೆ ಪ್ರಾಣವಾಗಿ
ಬಾ ಇಲ್ಲಿ ಸಂಭವಿಸು

ಶಿಥಿಲವಾಗಿಹ ಸ್ಮೃತಿಯ
ಶೃತಿಯು ಸೇರುವವರೆಗೂ
ನಂಬುಗೆಯು ಕಂಭದಿಂದೊಡೆವ ವರೆಗೂ
ಭಾವ ಭಕುತಿಯಾಗಿ ಹೆಪ್ಪಗಟ್ಟುವವರೆಗೂ
ಬಾ ಇಲ್ಲಿ ಸಂಭವಿಸು…

ಸಿಡಿಲಬ್ಬರದ ಮಾತು, ಗುಡುಗಿನಬ್ಬರದ ಸೊಕ್ಕು
ಜೀವದ ಬಿಕ್ಕುಗಳು ಮೆತ್ತನಾಗುವವರೆಗೂ
ಬಾ ಇಲ್ಲಿ ಸಂಭವಿಸು

ದೊಡ್ಡಸ್ತಿಕೆಯ ಸಣ್ಣ ತನಗಳು ಗಂಟು ಬಿಚ್ಚುವವರೆಗು
ಆರೋಪದ ಪ್ರವಾಹಗಳು ಕುದಿದುಕ್ಕಿ ಶಾಂತವಾಗುವ ವರೆಗೂ
ಧ್ಯಾನದ ಚೌಕಟ್ಟಿನಲ್ಲಿ ಅನಂತನಾದ ನಿನ್ನ ಪಡಿಮೂಡುವವರೆಗೂ
ಧನ್ಯತೆಯ ಬಟ್ಟಲಿನ ಹಾಲು ಕೆನೆಗಟ್ಟಿ ಉಕ್ಕುವವರೆಗೂ
ಬಾ ಇಲ್ಲಿ ಸಂಭವಿಸು

ಬಳಲಿದೀ ಬಾಳಿನಲಿ
ಪ್ರೀತಿ ಕರುಣೆಯ ನಿತ್ಯ ಅನುಸಂಧಾನವಾಗುವವರೆಗೂ
ಶುಭ್ರ ಪಾರಿಜಾತದೊಲವು ಬೃಂದಾವನ ಮುಟ್ಟುವವರೆಗೂ
ಹಸಿರ ಬಸಿರಿನ ಉಸಿರು ತೃಪ್ತಿ ತುಳಸಿ ಬಳಸುವವರೆಗೂ

ಮತ್ತೊಮ್ಮೆ ಮಗದೊಮ್ಮೆ
ಬಾ ಇಲ್ಲಿ ಸಂಭವಿಸು
ದೇವಕಿಯಾಗಿ
ಯಮುನೆಯಾಗಿ
ಯಶೋದೆಯಾಗಿ
ಗೋಪಿಯಾಗಿ
ಕೊಳಲಾಗಿ
ಖಗನಾಗಿ
ಮೃಗನಾಗಿ
ಸಖನಾಗಿ
ಪ್ರಿಯನಾಗಿ
ಬಾ ಇಲ್ಲಿ ಸಂಭವಿಸು

ನಳಿನಾ ಪ್ರಸಾದ್ ಅವರು ಕಾರ್ಘರ್ ಕರ್ನಾಟಕ ಸಂಘದ ಅಧ್ಯಕ್ಷರು. ಮುಂಬೈ ವಿಶ್ವವಿದ್ಯಾಲಯದ ಕನ್ನಡ ಎಂಎ. ಯಲ್ಲಿ ಪ್ರಥಮ ಸ್ಥಾನ ಪಡೆದು ವರದರಾಜ ಆದ್ಯ ಚಿನ್ನದ ಪದಕ ಪಡೆದಿರುತ್ತಾರೆ. ಖ್ಯಾತ ರಂಗತಜ್ನೆ. ಕವನ,ಲೇಖನಗಳನ್ನು ಬರೆಯುತ್ತಾರೆ.

‍ಲೇಖಕರು Avadhi

October 11, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. Shyamala Madhav

    ಆಹಾ! ನಳಿನಾ! ಏನು ಚಂದ! ಬರದಿರುವನೇ ಅವನು?

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: