‘ಬಹುರೂಪಿ ರಾಜ್ಯೋತ್ಸವ ಹಬ್ಬ’ ಅಂಗವಾಗಿ ಇಂದು ʼಪ್ರಕಾಶನ ರಂಗದ ಮುಂದಿನ ಸವಾಲುಗಳುʼ ಸಂವಾದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಸಂವಾದದಲ್ಲಿ ಕರ್ನಾಟಕ ಪ್ರಕಾಶಕರ ಸಂಘದ ಅಧ್ಯಕ್ಶರೂ, ‘ಅಭಿನವ’ ಪ್ರಕಾಶನದ ಮುಖ್ಯಸ್ಥರಾದ ಎನ್ ರವಿಕುಮಾರ್, ಕನ್ನಡ ಪುಸ್ತಕ ಪ್ರಾಧಿಕಾರದ ಮಾಜಿ ಅಧ್ಯಕ್ಷೆ ವಸುಂಧರಾ ಭೂಪತಿ ಮತ್ತು ಸಾವಣ್ಣ ಪ್ರಕಾಶನದ ಮುಖ್ಯಸ್ಥರಾದ ಜಮೀಲ್ ಸಾವಣ್ಣ ಅವರು ಪಾಲ್ಗೊಂಡಿದ್ದರು.
ಸಂವಾದದ ಫೋಟೋ ಆಲ್ಬಂ ಇಲ್ಲಿದೆ.
ನಮಸ್ಕಾರ.
“ಪುಸ್ತಕ ರಂಗದ ಮುಂದಿನ ಸವಾಲುಗಳು” ಫೇಸ್ಬುಕ್ ಲೈವ್ ಸಂವಾದ ಕಾರ್ಯಕ್ರಮ ಅರ್ಥಪೂರ್ಣವಾಗಿತ್ತು. ಇಲ್ಲಿ ಚರ್ಚೆಗೆ ಇಟ್ಟ ವಿಚಾರಗಳು ಈಗಿನ ಸಮುದಾಯಕ್ಕೆ ಬಹಳ ಮುಖ್ಯವಾದ ವಿಚಾರಗಳು. ಈ ಬುಕ್ ಓದು ಹೆಚ್ಚು ಪರಿಣಾಮಕಾರಿ ಅಲ್ಲ. ಪುಸ್ತಕಗಳನ್ನು ಕೊಂಡು ಓದುವ ಹಾಗೆ ಮನೆಗಳಲ್ಲಿ ಗ್ರಂಥಾಲಯ ಸಂಸ್ಕೃತಿಯನ್ನು ಬೆಳೆಸುವ ಪರಂಪರೆ ನಿರಂತರವಾಗಿ ಹುಟ್ಟುತ್ತಲೇ ಇರಬೇಕು. ಜೊತೆಗೆ ನಾವೆಲ್ಲ ಸುಮಾರು ಹದಿನೈದು ವರ್ಷಗಳಿಂದ ಪುಸ್ತಕಗಳನ್ನು ಉಡುಗೊರೆಯಾಗಿ ಕೊಡುವ ಅಭ್ಯಾಸ ಮಾಡಿಕೊಂಡಿದ್ದೇವೆ. ಶಿಕ್ಷಕರ ಸಮುದಾಯ ಹೆಚ್ಚು ಈ ಪರಂಪರೆಯನ್ನು ಬೆಳೆಸಿದರೆ ಮಕ್ಕಳ ಕುತೂಹಲದ ದಿಕ್ಕನ್ನು ಬದಲಿಸಬಹುದು. ಅವಧಿ ಯ ಕಡೆಯಿಂದ ನಡೆದ ಈ ಸಂವಾದ ಕಾರ್ಯಕ್ರಮ ಪರಿಣಾಮಕಾರಿಯಾಗಿತ್ತು. ಮೋಹನ್ ಸರ್ ಗೆ ಅವಧಿ ಕುಟುಂಬಕ್ಕೆ ಧನ್ಯವಾದಗಳು.