ಬದುಕು ಲೆಕ್ಕಾಚಾರದ ಸಂತೆ

ಅರಗಿಸಿಕೊಂಡವರು

 ಡಿ ಜಿ ನಾಗರಾಜ ಹರ್ತಿಕೋಟೆ

ಕಾರ್ಮಿಕರಿವರಂತೆ…
ತುತ್ತು ಅನ್ನಕ್ಕಾಗಿ ಅಲೆದವರು
ವಿರಮಿಸದೆ ದುಡಿದವರು
ನೋವನ್ನೇ ಉಂಡವರು
ಒಂಥರಾ ಅಸಾಮಾನ್ಯರು

ಏನಾದರೇನಂತೆ..
ಬೇಗುದಿಯ ಬಿಸಿಯಲ್ಲಿ
ಬೇಳೆ ಬೇಯಿಸಿಕೊಳ್ಳುವವರಿಗೆ
ನೊಂದು ಬೆಂದವರಾವ ಲೆಕ್ಕ
ತಾವು ಬೆಳೆಯುವುದಷ್ಟೇ ಪಕ್ಕಾ

ದುರಂತವೆಂದರೆ….
ಬದುಕು ಲೆಕ್ಕಾಚಾರದ ಸಂತೆ
ಕಾರ್ಮಿಕರದು ಬವಣೆಗಳ ಕಂತೆ
ಬೆವರ ಹನಿಗೆ ನಿಜದ ಬೆಲೆಯಿಲ್ಲ
ಲೆಕ್ಕವಿಲ್ಲದವರಿಗೆ ದನಿಯಿಲ್ಲ

ವಿಪರ್ಯಾಸವೆಂದರೆ…
ಮಹಲಲಿರುವವಗೆ ಮಾತ್ರ ಕಾರುಬಾರು
ಮಹಲು ಕಟ್ಟಿದವನಿಗಿಲ್ಲ ಸೂರುಪಾರು
ನೆರಳಸುಖಿಗಳಿಗೆ ಎಲ್ಲವೂ ಲಭ್ಯ
ಬಿಸಿಲ ಶ್ರಮಿಕರಿಗದೋ ಅಲಭ್ಯ

ವಾಸ್ತವವೆಂದರೆ…
ಕಾಯಕದಲ್ಲಿ ಕೈಲಾಸ ಕಂಡವ
ಕರ್ಮದಲಿ ಧರ್ಮವ ಕಂಡವ
ಭೋಗಿಯಲ್ಲವನು ತ್ಯಾಗಿ
ನಾಡು ಕಟ್ಟಿದ ನಿಜಯೋಗಿ

‍ಲೇಖಕರು nalike

May 14, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

3 ಪ್ರತಿಕ್ರಿಯೆಗಳು

  1. RAVICHANDRA HARTHIKOTE

    ತುಂಬಾ ಅರ್ಥಗರ್ಭಿತ ಕವಿತೆ.. ಇಂದಿನ ವಾಸ್ತವಿಕತೆಗೆ ಹಿಡಿದ ಕನ್ನಡಿ ಕೂಡ..

    ಪ್ರತಿಕ್ರಿಯೆ
  2. Mahesha H N

    ಕಾರ್ಮಿಕರ ಕಷ್ಟ ಇನ್ನೆಷ್ಟಿದೆ ಪಾಪ? ಕವನ ಚನ್ನಾಗಿ ಮೂಡಿದೆ ಬ್ರೋ

    ಪ್ರತಿಕ್ರಿಯೆ
  3. Adivala Gangamma

    ಮಹಲಲಿರುವವರಿಗೆ ಮಾತ್ರ ಕಾರುಬಾರು, ಮಹಲ ಕಟ್ಟಿದವರಿಗಿಲ್ಲ ಸೂರುಪಾರು _ ವಾಸ್ತವತೆಯ ಕಣ್ತೆರೆಸುವ ಸಾಲು, ಕವನ ಚೆನ್ನಾಗಿದೆ

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: