ಬದರಿನಾಥ್ ಪಳವಳ್ಳಿ ಕವಿತೆ- ಒರೆಸಿದರೆ ಸಾಕಲ್ಲ…

ಬದರಿನಾಥ್ ಪಳವಳ್ಳಿ

ಪರಿಸರವು ಚಹರೆಗಳು
ಮಂಕು ಕವಿದಂತೆ ಗೋಚರಿಸಿ
ತಳಮಳದಿ ಅಟಮಟಿಸಿದ್ದೆ,
ಯಾಕಿನಿತು ಜಿಡ್ಡು ಓ ಕರ್ತಾ
ಹರಳೆಣ್ಣೆ ಲೇಪಿತವೇಕಿದು
ಜಗದ ನಗು ಗ್ರೀಸುಗ್ರಸ್ತ!

ನಸೀಬುಗೇಡಿಗೆ ಕೈಗತ್ತದು
ಮರದ ಬುಡವಗೆದರೂ
ಕಂತೆ ಕಂತೆ ರೊಕ್ಕದ ಚೀಲ,
ಕಾಡುಗಳ್ಳನೆಂದೋ ಬಚ್ಚಿಟ್ಟ
ಸಿಕ್ಕವನಿಂದು ತಾ ಗೋಳಿಟ್ಟ
ಈಗವು ಅಮಾನ್ಯ ನೋಟು

ನಿನ್ನ ಲೀಲೆಗಳ ಮರ್ಮ
ಸಾಪ್ತಾಹಿಕದ ಪದಬಂಧ,
ಮೇಲಿಂದ ಕೆಳಗಿನ ಸಾಲು
ಪಟ್ಟನೆ ಅರ್ಥವಾಗದ ರಚನೆ
ಕಾಯಬೇಕು ಮರು ವಾರಕೆ
ನಡುವಣ ಅಡ್ಡಲ ಪದಕೂ

ಪ್ರಶ್ನೆ ಪುಂಖಾನು ಪುಂಖ,
ತಿಕ್ಕಿಯೇ ತಿಕ್ಕಿದೆ ನೇತ್ರದ್ವಯ
ನನ್ನ ನೋಟದ ಮೇಲೇ
ಡೌಟಾವರಸಿ ದೌಡು ತೆಗೆದೆ,
ಬಡಿದೆ ಕಣ್ಣ ವೈದ್ಯರ ಕದವ
ಕಣ್ಣೀರು ರಸೀತಿ ತುಂಬುವಾಗ

ನಸು ನಕ್ಕ ನೇತ್ರ ತಜ್ಞ,
ಧೂಳುಮಯ ಕನ್ನಡಕವ
ಸಿಂಪಡಿಸಿ ಒರೆಸಿ ಕೈಗಿಟ್ಟ!

‍ಲೇಖಕರು Avadhi

May 25, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: