ಪ್ರೊ ಬಿ ಎ ವಿವೇಕ ರೈ ಅವರ ‘ಅಕ್ಕರ ಮನೆ’ ಕೃತಿ ಮಂಗಳೂರಿನಲ್ಲಿ ಇಂದು ಬಿಡುಗಡೆಗೊಂಡಿತು.
‘ಬಹುರೂಪಿ’ ಪ್ರಕಟಿಸಿರುವ ಈಕೃತಿಯನ್ನು ಖ್ಯಾತ ಸಾಹಿತಿ ವೈದೇಹಿ ಅವರು ಬಿಡುಗಡೆ ಮಾಡಿದರು. ಪ್ರೊ ಎಂ ರಾಮಚಂದ್ರ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ನಾ ದಾಮೋದರ ಶೆಟ್ಟಿ ಹಾಗೂ ಕೃಷ್ಣಮೂರ್ತಿ ಚಿತ್ರಾಪುರ ಮುಖ್ಯ ಅತಿಥಿಗಳಾಗಿದ್ದರು.
ತೀರಾ ಭಿನ್ನವಾಗಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ವಿವೇಕ ರೈ ಅವರ ಬರವಣಿಗೆಯ ಪಯಣದ ಝಲಕ್ ನೀಡುವ ಕವಿತೆ, ಸಿನೆಮಾ ಗೀತೆ, ಪ್ರಬಂಧ ವಾಚನ ಇತ್ತು.
ಆಕೃತಿ ಆಶಯ ಪಬ್ಲಿಕೇಷನ್ಸ್, ಬಹುರೂಪಿ, ರಂಗ ಸಂಗಾತಿ, ವಿಕಾಸ ಸಂಘಟನೆಗಳು ಜಂಟಿಯಾಗಿ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದವು.
ಈ ಕೃತಿ ಕೊಳ್ಳಲು ಇಲ್ಲಿ ಸಂಪರ್ಕಿಸಿ –
0 ಪ್ರತಿಕ್ರಿಯೆಗಳು