ಪ್ರೀತಿ
—-
ಮತ್ತೆ ನವರಾತ್ರಿ ಕಳೆದಿದೆ,
ವಿಜಯಕ್ಕೆ ದಶಮಿಯೂ ಮುಗಿದಿದೆ,
ಕಾಳಿ, ದುರ್ಗೆಯರೆಲ್ಲ ಅಡುಗೆಮನೆಗೆ ಮರಳಿದ್ದಾರೆ,
ತಮ್ಮ ಶಸ್ತ್ರಗಳನ್ನು ತ್ರಿಶೂಲದಿಂದ ತಾಳ್ಮೆಗೆ ಬದಲಾಯಿಸಿ ಕೊಂಡಿದ್ದಾರೆ,
ಪ್ರತಿಬಾರಿ ಕೆಣಕಲು ರಾವಣನೇ ಆಗಬೇಕಿಲ್ಲ,
ಬದುಕಿನ ಜಂಜಾಟಗಳೇ ಸಾಕು,
ಒಳ್ಳೆಯದು ಕೆಟ್ಟದ್ದು ಎಲ್ಲದರಲ್ಲೂ ಪರೀಕ್ಷೆಗೆ ಬೀಳುವುದು ಅವಳ ಸ್ತ್ರೀ ಶಕ್ತಿ,
ಯಾವುದೇ ಸವಾಲಿನ ಅಂತ್ಯದಲ್ಲಿ,
ಅವಳಿಗೆ ಪಟ್ಟ ಬೇಕಿರುವುದಿಲ್ಲ,
ಅವಳು ಬಯಸುವುದು ಬರೀ ಶಾಂತಿ,
ಪ್ರತೀ ಸಲ ಪ್ರೀತಿಯ ಅಸ್ತ್ರ ಪ್ರಯೋಗಿಸುತ್ತಾಳೆ,
ನಗೆಯ,ಅಳುವಿನ, ಮಾತಿನ ಬಾಣಗಳ ಮೂಲಕ!
ಆದರೆ ಅಸುರನ ವಧೆಗಲ್ಲ, ಜೀವನದ ಗೆಲುವಿಗೆ!
ಬಹಳ ಚಂದದ ಕವಿತೆ