ಪಿ ಆರ್ ವೆಂಕಟೇಶ್ ಕವಿತೆ- ಕತ್ತಲಲ್ಲಿ ಚಂದ್ರ…

ಪಿ ಆರ್ ವೆಂಕಟೇಶ್

ಪ್ರತಿ ರಾತ್ರಿಯ ಮುಗಿಲ ಕೌಳದಲ್ಲಿ
ಚಂದ್ರ ಕಣ್ಣೀರ ಹನಿಯಂತೆ ಕಾಣುತ್ತಾನೆ
ನೆಲದ ಕತ್ತಲ ಧೂಳ ಹನಿತುಂಬ ಬಿಂಬಿಸಿ.

ಕನಸ ಶವಹಾಸಿಗೆ ಅಪ್ಪಿದ ಮನಸು ನಿದ್ದೆಯೊದ್ದು
ತಡಕಾಡಿದೆ.
ಕಣ್ಣಹನಿ ವದ್ದೆಗೆ ತಣ್ಣಗಾದ ತೆಲೆದಿಂಬಿಗೆ ಬೆಳದಿಂಗಳ ಬಿಸಿಯುಸಿರು.

ನೆಲದ ಬಿರುಕುಗಳೆಲ್ಲ ಒಟ್ಟಾಗಿ ಮುಗಿಲಿಗೆ ರಾಚಿ
ಅರ್ಥವಾಗದ ಚಿತ್ರ ಕೊರೆದಿವೆ
ಎಲ್ಲ ವಿಕೃತಿಗಳ ಹೊತ್ತು.

ಅರಳುವ ಗುಲಾಬಿಯ ದಳಗಳ ಒಂದೊಂದೇ ಉರುಳಿವೆ
ಉಳಿದ ಮುಳ್ಳು ಬೆಳದಿಂಗಳ ತಂಪಿಗೆ ಗಾಯಗಳ ಕೊರೆದಿದೆ.

ಎಲ್ಲಿಯ ಕರುಣೆ ಹೇಳಿ ಕರುಳಿಲ್ಲದ ಬಳ್ಳಿಗೆ
ಬೆವರ ಬಾಂಡಲೆಯೊಳಗೆ ಬಿಟ್ಟ ಬೇರುಗಳು
ಬೆಂಕಿಯ ಅಲೆಯಾದಾಗ.
ಕಾಡ ಹಸಿವು ನಾಡ ಹಸಿವಾಗಿ
ಹುಲಿ ಸಿಂಹ ಚಿರತೆಗಳು ಊರ ಸೇರಿರುವಾಗ.

ಫೋರ್ಡ ಸುಜುಕಿ ಹೊಂಡಾಗಳ
ಘರ್ಜನೆ ತುಂಬಿರುವ ಹಾದಿಯಲಿ
ಮನುಷ್ಯರ ಮಾತೇಲ್ಲಿ, ಹಾಡೆಲ್ಲಿ, ನೆಗೆದ ನೆಗೆಯೆಲ್ಲಿ.

ನನ್ನ ಬೆವರು ಹೊತ್ತ ಟ್ರಿಪ್ಪರ್ ಲಾರಿಗಳ ಜಿಗಿದೋಟ
ಬದುಕಿನ ಕನಸ ಮೂಳೆಗಳನೆಲ್ಲ ನುಚ್ಚನೂರಾಗಿಸಿ
ಎತ್ತಲೋ ಸುರುವಿ ಮೈಕೊಡವಿ ನಗುತ್ತವೆ.

ನಿಂತಲ್ಲೇ ದಿಟ್ಟಿಸುತ್ತೇನೆ ಬೆವರು ಹೆತ್ತ ಬೆಟ್ಟವನ್ನು
ನನ್ನಿಂದ ದೂರ ಓಡುವ ಅದರಾಚೆಯ ಬೆಳಕನ್ನು.

ದಾರಿಯ ಮೈಗೆ ಚಕ್ರಗಳು ಕೊರೆದ ಗಾಯಗಳು
ಕಣ್ಣಲ್ಲಿ ಹೆಪ್ಪಾಗುತ್ತವೆ ಕೆಂಡವರಳಿಸಿ.
ಮುಗಿಲ ಕತ್ತಲಲ್ಲಿ ಚಂದ್ರ ಕಣ್ಣೀರ ಹನಿಯಾಗುತ್ತಾನೆ.

‍ಲೇಖಕರು Admin

January 7, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: