ಪಾಪಿಗಳ ಲೋಕದಲ್ಲಿ!

ಕು ಸ ಮಧುಸೂದನ ರಂಗೇನಹಳ್ಳಿ

ಸುತ್ತಿದಷ್ಟೂ ಗುಡಿಗುಂಡಾರ
ಮುಚ್ಚಿಕೊಳ್ಳುವುದು ಸ್ವರ್ಗದ ಬಾಗಿಲು
ತೆರೆದಿಟ್ಟ ನರಕದ ಬಾಗಿಲಲ್ಲೋ
ನೂಕು ನುಗ್ಗಲು

ನಾನು ತೀರಾ ಚಿಕ್ಕವನು
ಲೋಕದೊಳಗಿನ
ದೊಡ್ಡವರ ಮುಂದೆ
ಹಾಗಂತಲೇ ಅವರು ಹೇಳಿದ್ದನ್ನು
ಶಿರಸಾವಹಿಸಿ ಮಾಡುತ್ತೇನೆ
ಪೂಜೆ ಪ್ರಾರ್ಥನೆ ನಮಾಜು
ನಿಷಿದ್ದಗಳ ಬಗ್ಗೆ ಮಾತಾಡಿದಾಗಲೂ
ನಾನು
ಕೇಳುವುದಿಲ್ಲ ಪ್ರಶ್ನೆಗಳ

ಹಾಗಂತ
ಚಂಚಲವಾಗುವುದಿಲ್ಲವಂತೇನು ಅಲ್ಲ ಮನಸು
ಅವಳ ಸೀರೆ ನಿರಿಗೆಗಳ ಕಂಡಾಗ
ಮರುಕ್ಷಣ
ಪಾಪನಿವೇದನೆ
ಮಾಡಿಕೊಳ್ಳುತ್ತೇನೆ
ಏಕಾಂತದಿ ನಿರಾಕಾರ ನೆನೆದು

ಇಷ್ಟಾದರು ಚಿತ್ತಭಿತ್ತಿಯಲಿ
ಅಚ್ಚಳಿಯದೆ ಉಳಿದ
ಅವಳ ಮುಖ ಕಣ್ಣೊಳಗೆ ಕಾಡುತ್ತಿರುತ್ತದೆ

ಕ್ಷಮಿಸು ನಿರಾಕಾರನೆ
ಕಾಣದ ನಿನಗಿಂತ ಕಾಣುವ ಅವಳೇ ಹೆಚ್ಚು ಸತ್ಯ
ಕ್ಷಮಿಸಿಬಿಡು ಸಾದ್ಯವಾದರೆ

ನಿಜ ನಿನ್ನ ಮಾತು
ಪಾಪಿಗಳ ಲೋಕದೊಳಗೆ ಯಾವುದೂ ಪವಿತ್ರವಲ್ಲ!

‍ಲೇಖಕರು Avadhi

April 12, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. ಶಿವಲೀಲಾ

    ಮನದ ವಿಕಾರಗಳಿಗೆ ಕೊನೆಯಿಲ್ಲ…ಹಾಗಂತ ಅವು ಮಾನದಂಡವು ಅಲ್ಲ ಸುಂದರ ಅಭಿವ್ಯಕ್ತಿಯ ಕವಿಗೆ..

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: