ಪದ್ಮಿನಿ ನಾಗರಾಜು ಕವಿತೆ – ಮದ್ದು ಹಾಕುವವರಿದ್ದಾರೆ…

ಡಾ ಪದ್ಮಿನಿ ನಾಗರಾಜು

ತೆಕ್ಕೆಯಲಿ ಆಲಂಗಿಸಿದವರೆಲ್ಲಾ
ನನ್ನವರೆಂದು ನಂಬದಿರು
ಮುಚ್ಚಿದ ಅಂಗೈಯಲ್ಲಿ
ಮದ್ದಿಹುದೋ ಪ್ರೀತಿಯೋ
ಉಸಿರುಗಟ್ಟುವ ಮುನ್ನ
ಬಿಡುಗಡೆಯ ತವಕ

ಬಿಸಿಲ ಧಗೆಯಲಿ
ತಂಪನೀವ ಹೊಂಗೆ ಮರವ
ನಂಬದಿರು
ತಂಗಾಳಿಯೂ
ಸುಳಿಗಾಳಿಯಾಗಬಹುದು

ಅವರವರ ತಕ್ಕಡಿಯಲಿ
ತೂಗು ಹಾಕಿದವರ
ಮುಖದ ಬಣ್ಣವೆಲ್ಲಾ
ಮಳೆಯೂ ತೊಳೆದಿದೆ
ಮುದಿ ಮುಖ ಹೊತ್ತ
ಶವಗಳ ದಿಟ್ಟಿಸು
ಸತ್ಯ ಯಾವುದೆಂದು

ಮೌನ ಮಾತಾಗಿಸಿ
ಕಂಬಳಿ ಹುಳುವಿನಂತೆ
ಗೂಡು ಸೇರು
ಕಂಬಳಿ ಹುಳು
ಚಿಟ್ಟೆಯಾಗುವ ಅಚ್ಚರಿಗಿಂತ
ಮನುಷ್ಯ ಬದಲಾಗುವ
ಕಾದು ನೋಡು

ಜಾತ್ರೆಯಲಿ
ಕೈಹಿಡಿದವರು
ಕೈಬಿಟ್ಟವರು
ಮುಖವಾಡ ಹೊತ್ತವರು
ಮಾತಿನಲಿ ಜೇನ ಮೆತ್ತಿದವರು
ಎದೆಯಲಿ ಕಿಡಿಯ ಹೊತ್ತಿಸಿದವರು
ಯಾರ ಯಾರ ನೆನೆಯಲಿ
ದೇವರೇ….
ಅವರ ನಗುವಿನ ಮರ್ಮ
ಅರಿಯುವ ಸಹನೆ ಕೊಡು
ಸಂಬಂಧಗಳ ಕಳಚಿ
ಏಕಾಂಗಿ ದಾರಿಯಲಿ
ಸುಮ್ಮನೆ ನಡೆಯಬೇಕಿದೆ
ಕಾಲು ಸವೆಯುವವರೆಗೆ
ಕಸುವ ಕೊಡು

‍ಲೇಖಕರು Admin

November 16, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: