ನಲ್ಮೆ.
ನಾಳೆ ಭಾನುವಾರ ಬೆಳಿಗ್ಗೆ 10.30 ಕ್ಕೆ “”ವಿಶ್ವದಾಖಲೆ” ನಿರ್ಮಿಸಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಗಳಿಸಿರುವ ನಮ್ಮ “ಬಿಂಬ—ಆ ತೊಂಬತ್ತು ನಿಮಿಷಗಳು” ಚಲನ ಚಿತ್ರದ ಉಚಿತ ಪ್ರದರ್ಶನವಿದೆ.
“ಒಬ್ಬನೇ ನಟ(ಶ್ರೀನಿವಾಸ ಪ್ರಭು); 103 ನಿಮಿಷಗಳ ಒಂದೇ ಶಾಟ್ ನಲ್ಲಿ ಇಡೀ ಚಿತ್ರದ ಚಿತ್ರೀಕರಣ(ಡಿಓಪಿ—ಪಿ ಕೆ ಹೇಚ್ ದಾಸ್ ), ಸಂಗೀತಕ್ಕೆ ಒಂದೇ ಒಂದು ವಾದ್ಯದ ಬಳಕೆ(ಕೊಳಲು—ಪ್ರವೀಣ್ ಗೋಡಖಿಂಡಿ) —ಇವು ನಮ್ಮ ಚಿತ್ರದ ಹೆಗ್ಗಳಿಕೆಗಳು.ಕನ್ನಡದ ಶ್ರೇಷ್ಠ ನಾಟಕಕಾರ ಸಂಸರ ಬದುಕನ್ನು ಆಧರಿಸಿರುವ ನಮ್ಮ ಈ ‘ಬಿಂಬ’ ಚಿತ್ರದ ನಿರ್ದೇಶಕರು ಜಿ.ಮೂರ್ತಿ ಹಾಗೂ ಶ್ರೀನಿವಾಸ ಪ್ರಭು.
ಸ್ಥಳ: ಪ್ರಯೋಗ್ ಸ್ಟುಡಿಯೋ ಥಿಯೇಟರ್ , ಕತ್ತರಿಗುಪ್ಪ ಸಿಗ್ನಲ್.
ಸಮಯ: ಬೆಳಿಗ್ಗೆ 10:30.
ಕೇವಲ ನೂರು ಜನರಿಗೆ ಮಾತ್ರ ಸ್ಥಳಾವಕಾಶವಿದೆ. ಪ್ರದರ್ಶನದ ನಂತರ ಸಂವಾದವೂ ಇದೆ. ಆಸಕ್ತರು ದಯವಿಟ್ಟು ಬನ್ನಿ.ಸದಭಿರುಚಿಯ ಹೊಸಬಗೆಯ ಕನ್ನಡ ಚಿತ್ರಗಳನ್ನು ಪ್ರೋತ್ಸಾಹಿಸಿ.
-ರಂಜನಿ ಪ್ರಭು
0 ಪ್ರತಿಕ್ರಿಯೆಗಳು