ನಾರಾಯಣ ರಾಯಚೂರ್ ಕವಿತೆ- ನಾಟಕವು ನಿಲ್ಲದೆಂದೂ!!…

ವಿಶ್ವ ರಂಗ ಭೂಮಿ ದಿನಾಚರಣೆ ಅಂಗವಾಗಿ ಆಶಯ ನುಡಿ ಕಾವ್ಯ

ನಾರಾಯಣ ರಾಯಚೂರ್

ರಂಗ ಬಾಂಧವರೆಲ್ಲ
ಒಂದಾಗಿ ಹಾಡೋಣ
ಛಂದಾದ ರಂಗ ಕಲೆ
‘ರಂಗ ಭೂಮಿ’-ಎಂದು.
ಆನಂದದಾ ಸೆಲೆ
‘ರಂಗ ಭೂಮಿ’-ಎಂದು.
ಭೂಮಿ-ತೂಕದ ಅಭಿವ್ಯಕ್ತಿ
‘ರಂಗ-ಭೂಮಿ’-ಎಂದು.

ಅಂದು,ಇಂದು
ಎಂದು -ಮುಂದೂ
ರಂಗಕ್ಕೆ ಇಲ್ಲ -ಕುಂದು!
ನಾಟಕವು ನಿಲ್ಲದೆಂದೂ!!

ಭರತ, ಭಾಸ-ಕವಿ
ಕಾಳಿದಾಸ ಭವಭೂತಿ
ಬ್ರೆಕ್ಟ್, ಷೇಕ್ಸ್ ಪಿಯರ್
ಇಬ್ಸನ್ ವಿಲಾಯತಿ.,
ಪೂರ್ವ- ಪಶ್ಚಿಮ
ಭಿನ್ನ,ಭಿನ್ನ ಸಂಸ್ಕೃತಿ
ವಿನಿಮಯದ ಮೂಲಕ
ಸಮ್ಮಿಲನ, ಸ್ವೀಕೃತಿ.

ಬಣ್ಣ -ಬಿನ್ನಾಣಗಳ
‘ಕಣ್ಣ-ಯಜ್ಞ’ ವೆ ರಂಗ,
ಭಾವ ರಸ-ಯಾನ
ಅವಿಭಾಜ್ಯ ಅಂಗ.

ಜಗವೆ ನಾಟಕ-ರಂಗ
ಜೀವಿಗಳೇ ಪಾತ್ರ;
ದೇಶ ಕಾಲೈಕ್ಯಗಳ
ಸಮೃದ್ಧ ಗಾತ್ರ.
ದಿನ-ವಿದ್ಯಮಾನಗಳೆ
ಅನುಪಮ ‘ಪ್ರಸಂಗ’ಗಳು
ಸಾಕ್ಷಿ-ಭಾವದ ಪ್ರೇಕ್ಷಕನೇ
‌ಕಂಗಳು….
ನಾಟಕದ ನೋಟಕನೇ
ಬೆಳದಿಂಗಳು…

ನೋವು-ನಲಿವುಗಳೆಲ್ಲ,
ಸೋಲು-ಗೆಲವುಗಳೆಲ್ಲ,
ಕಾಲ-ಕಾಲಕ್ಕೆ
ಅಭಿವ್ಯಕ್ತಿಗೊಂಡು,
ಅರಿವಿನೆಚ್ಚರ ಮೂಡಿ
ರಂಗ-ಕಲೆ ಕೊಂಡಾಡಿ
ಭಂಗವಾಗದ ಶಕ್ತಿ
ಕಂಡು ಕೊಂಡು-
ಸಾಗುತ್ತಿರಲಿ -‘ರಂಗ’
ಪ್ರಬಲಗೊಂಡು.
SHOW MUST GO ON…..

ಜಯ, ಜಯಾ
ಜಯ ವಿಶ್ವ ರಂಗ;
ದಿಗ್ವಿಜಯಾಭ್ಯುದಯಾ
ವಿಶ್ವ ರಂಗ

‍ಲೇಖಕರು avadhi

March 27, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: