ವಸುಧೇಂದ್ರ
ನನ್ನ ಪ್ರಬಂಧ ಸಂಕಲನ ’ನಮ್ಮಮ್ಮ ಅಂದ್ರೆ ನಂಗಿಷ್ಟ’ ಈಗ ತೆಲುಗಿನಲ್ಲಿ ಪ್ರಕಟವಾಗುತ್ತಿದೆ. ಬಳ್ಳಾರಿಯವಳಾದ ನನ್ನಮ್ಮ, ಯಾವತ್ತೂ ತೆಲುಗು ಪುಸ್ತಕಗಳನ್ನು ಇಷ್ಟ ಪಟ್ಟು ಓದುತ್ತಿದ್ದಳು. ಆ ಕಾರಣದಿಂದಾಗಿ ಇದು ನನಗೆ ಸಂಭ್ರಮದ ಸಂಗತಿಯಾಗಿದೆ.
ನನ್ನ ’ಮೋಹನಸ್ವಾಮಿ’ ಕೃತಿಯನ್ನು ತೆಲುಗು ಓದುಗರು ತುಂಬು ಹೃದಯದಿಂದ ತಮ್ಮದಾಗಿಸಿಕೊಂಡಿದ್ದಾರೆ. ಆದ್ದರಿಂದ ಈ ಹೊಸ ಕೃತಿಯ ಅನುವಾದ ನನ್ನಲ್ಲಿ ಹಲವು ನಿರೀಕ್ಷೆಗಳನ್ನು ಮೂಡಿಸಿವೆ. ಕನ್ನಡದ ಮುಖಪುಟವನ್ನೇ ತೆಲುಗಿನಲ್ಲಿಯೂ ಬಳಿಸಿದ್ದಾರೆ. ಆದ್ದರಿಂದ ಇದು ಕನ್ನಡ ಮುಖಪುಟ ಅನುವಾದವೂ ಹೌದು! ಅದರ ಕಲಾವಿದೆ ಸೌಮ್ಯ ಕಲ್ಯಾಣಕರ್ ಗೆ ಧನ್ಯವಾದಗಳು.
ಈ ಪುಸ್ತಕವನ್ನು ರಂಗನಾಥ ರಾಮಚಂದ್ರ ರಾವ್ ಅನುವಾದಿಸಿದ್ದಾರೆ. ಅವರಿಗೆ ಈ ಹಿಂದೆ ಕುವೆಂಪು ಭಾಷಾ ಭಾರತಿಯ ಬಹುಮಾನವೂ, ಸಾಹಿತ್ಯ ಸಮ್ಮೇಳನದ ಗೌರವವೂ ದಕ್ಕಿವೆ. ಅವರ ಕನ್ನಡ ಪ್ರೀತಿ ಅನನ್ಯವಾದದ್ದು. ಗೆಳೆಯರಾದ ಮೋಹನ್ ಬಾಬು ಅವರು ಈ ಕೃತಿಯನ್ನು ತಮ್ಮ ಛಾಯಾ ಪಬ್ಲಿಕೇಷನ್ಸ್ ಮೂಲಕ ಪ್ರಕಟಿಸುತ್ತಿದ್ದಾರೆ. ಎಲ್ಲರಿಗೂ ನಾನು ಆಭಾರಿ.
0 ಪ್ರತಿಕ್ರಿಯೆಗಳು