ಜಯಂತ ಕಾಯ್ಕಿಣಿ ಮತ್ತು ಪಾಟಿಚೀಲ

ಈ ದಿನ ಜಯಂತ ಕಾಯ್ಕಿಣಿ ಅವರ ಎರಡು ಕೃತಿಗಳು ಬಿಡುಗಡೆಯಾಗುತ್ತಿವೆ

ಈ ಸಂದರ್ಭದಲ್ಲಿ ಒಂದು ಕವಿತೆ

ಶರತ್ ಪಿ ಕೆ

ಜಯಂತರು ಎಲ್ಲಿ ಹೋದರು ತನ್ನೊಡನೆ ಒಂದು ಪಾಟಿಚೀಲವೊಂದನ್ನು ಕೊಂಡೊಯ್ಯುತ್ತಾರೆ.
ಅದರೊಳಗೆ ಏನಿರಬಹುದು?
ಕಲ್ಲು ಸಕ್ಕರೆಯೋ ಅಥವಾ ಒಂದು ಜಿಲೇಬಿಯೋ ಎಂದು
ನನಗೆ ಯಾವಾಗಲೂ ಕುತೂಹಲ ಕಾಡುತ್ತದೆ.

ತೊದಲು ಮಾತಿನ ಪುಟ್ಟ ಮಗು,
ತನ್ನ ಸುತ್ತಮುತ್ತಲಿನ ಎಲ್ಲಾ ಚರಚಾರಗಳೊಂದಿಗೆ ಸಹಜವಾಗಿ
ಸಂಭಾಷಣೆಗೆ ತೊಡಗುವಂತೆ,
ಬದುಕಿಗೆ ತನ್ನ ಭಾಕೋಶವನ್ನು ತೆರೆದು ಕುಳಿತಿರುವಂತೆ ಚಿತ್ರ ಮೂಡುತ್ತದೆ.

ಜಗತ್ತನ್ನೆ ತನ್ನ ಜೋಳಿಗೆಯಲ್ಲಿಟ್ಟುಕೊಂಡು ತಿರುಗುವ ಸಂತನಂತೆ, ಎದುರಿಗಿರುವವರ
ಎದೆ ಬಡಿತದ ಏರಿಳಿತದ ಸದ್ದಿಗೆ
ಕಿವಿಯಾಗಿ ಸಂವೇದನೆಯನ್ನು ಅಳೆಯುತ್ತಾ ಅಲೆಯುತ್ತಿರುವಂತೆ ಭಾಸವಾಗುತ್ತದೆ.

ಕುತೂಹಲದ ಕಣ್ಣಿನ ಶಾಲಾ ಬಾಲಕನಂತೆ
ಆಗಾಗ ಪಾಟಿ ಚೀಲದಲ್ಲಿನ
ಸ್ಲೇಟನ್ನು ಹೊರ ತೆಗೆದು ಗೀಜಿ, ಬರೆದು, ಅಳಿಸಿ, ತಿದ್ದಿ ತೀಡಿ, ಬೇಕಾದಂತೆ ಬದುಕಿಗೆ
ಬಣ್ಣ ತುಂಬಿದಂತೆ ರಂಜಿಸಿದಂತೆ ಸ್ವಪ್ನ ಬೀಳುತ್ತದೆ.

‍ಲೇಖಕರು Avadhi

March 28, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: