–ಇಂದುಮತಿ.ಸಿ
ಜಂತರ್ ಮಂತರ್
ಜಂತರ್ ಮಂತರ್ ಅಂಗಳದಲ್ಲಿ
ನಿಂತಿರುವುದು ಜನರಲ್ಲ…
ತುಳಿಯಲ್ಪಟ್ಟ ಕನಸುಗಳು,
ಕೇಳಿಸದ ನೋವುಗಳು,
ನ್ಯಾಯಕ್ಕಾಗಿ ಹಠ ಹಿಡಿದ ಜೀವ ಕಳಕೊಂಡ ಆತ್ಮಗಳು.
ಕೈಯಲ್ಲಿರುವ ಫಲಕಗಳಿಗಿಂತ
ಎದೆಯಲ್ಲಿರುವ ಗಾಯಗಳೇ ದೊಡ್ಡವು.
ಕೂಗುವ ಘೋಷಣೆಗಳಿಗಿಂತ
ಮೌನದ ಕಣ್ಣೀರು ಹೆಚ್ಚು ಮಾತನಾಡುತ್ತದೆ.
ನಮ್ಮ ಧ್ವನಿ ಅಧಿಕಾರದ ವಿರುದ್ಧವಲ್ಲ,
ಅನ್ಯಾಯದ ವಿರುದ್ಧ.
ನಮ್ಮ ಹೋರಾಟ ಕುರ್ಚಿಗಳಿಗಾಗಿ ಅಲ್ಲ,
ಕಸಿದುಕೊಂಡ ಗೌರವಕ್ಕಾಗಿ.
ಪ್ರತಿ ಹೆಜ್ಜೆಯೂ ಒಂದು ಪ್ರಶ್ನೆ—
“ಸಂವಿಧಾನ ಎಲ್ಲರಿಗೂ ಒಂದೇ ಅಲ್ಲವೇ?”
ಪ್ರತಿ ಘೋಷಣೆಯೂ ಒಂದು ಪ್ರತಿಜ್ಞೆ
ನ್ಯಾಯ ಸಿಗುವವರೆಗೂ
ನಮ್ಮ ಕಂಠ ಮೌನವಾಗದು.
ಇಂದು ನಾವು ರಸ್ತೆಯ ಮೇಲೆ ನಿಂತಿದ್ದೇವೆ,
ನಾಳೆ ಇತಿಹಾಸ ನಮ್ಮ ಪರ ನಿಲ್ಲಲಿದೆ.
ಏಕೆಂದರೆ…
ಹೋರಾಟ ಸೋಲುವುದಿಲ್ಲ,
ಸೋಲುವುದು ಮೌನ.
ತಲೆಬಾಗುವುದು ನಾವು ಅಲ್ಲ,
ತಲೆತಗ್ಗಿಸುವುದು ಅನ್ಯಾಯ.






0 Comments