ಕೆ ಆರ್ ಸೌಮ್ಯಾ ಕವಿತೆ – ಮತ್ತೆ ಸಂಭವಿಸು ಇಲ್ಲಿ…

ಕೆ ಆರ್ ಸೌಮ್ಯಾ

“ಊರ ಹೊರಗಿನವನಲ್ಲ
ಹೊಲೆಯ ಒಳಗಿರುವವನು”
ಅಂದೆಯಲ್ಲ…
ಯಾರಿಗೆ ಮುಟ್ಟಿತು
ನಿನ್ನ ಮಾತು?
ಕಾಯದೊಳಗೆ
ಧರ್ಮದ ಅಫೀಮು
ಜಾತಿಯ ಹೊಲಸು
ಶ್ರೇಷ್ಠತೆಯ ತೆವಲು….
ಹೀಗೆ ಎಲ್ಲವುಗಳೂ
ತುಳುಕುವ
ಹೊಲೆತನ
ಊರಿನಿಂದಿನ್ನೂ ಒಳಗೆ
ಒಳಗೆ
ಒಳಗೆ
ಒಳಗೊಳಗಿನ
ಮಿದುಳುಗಳಿಗೆ
ತುಂಬಿದೆ

ಮತ್ತೆ ಸಂಭವಿಸು ಇಲ್ಲಿ

ಆ ಆದಿ ರಾಮ;
ವಾಲ್ಮೀಕಿ ರಾಮ;
ಮರ್ಯಾದಾ ರಾಮನಿಲ್ಲಿ
ಈಗ ಇಲ್ಲಿ
ಎದೆಗೆ ಬಿಲ್ಲೇರಿಸಿ
ತನ್ನ ಇರುವಿನ
ಮಂದಿರದ ಮೇಲೆ
ವೀರನಾಗಿ ನಿಂತಿರುವ
ಕ್ರೂರತೆಯ ಕಂಡು ಸೀತೆ ಕಾನನದೊಳಗೆ
ದುಃಖಿಸುತ್ತಿರುವಾಗ
ಲಕ್ಷ್ಮಣ ನಾಪತ್ತೆಯಾದ
ಭಕ್ತ ಹನುಮ
ಭಜರಂಗಿಯಾಗಿ
ರಾಮನಿಗೂ ಮಿಗಿಲಾಗಿ
ಬೊಬ್ಬುರಿಯುತ್ತಿರುವಾಗ
ನೀನು ಹೇಳಿದ
‘ರಾಮ ಧಾನ್ಯ’ವನುಂಡವರು
ದರ್ಪಕ್ಕೆ ಬಿದ್ದಿರುವಾಗ
ಅದೇ ಧಾನ್ಯ
ಬೆಳೆದವರು ಸಾವಿಗೆ
ಶರಣಾಗುವ ಗತಿಗೆ ಬಂದಿದ್ದಾರೆ

ನಾವು ಉಸಿರಾಡಬೇಕಿದೆ
ಮತ್ತೆ ಸಂಭವಿಸು ಇಲ್ಲಿ
ಕನಕನೇ….
ಕಾದಿದ್ದೇವೆ
ಮತ್ತೆ ಸಂಭವಿಸು ಇಲ್ಲಿ

‍ಲೇಖಕರು Admin

November 11, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: