ಮಾಲಾ ಮ ಅಕ್ಕಿಶೆಟ್ಟಿ
ಜಾತಿಗಳ ನ್ಯೂನ್ಯತೆ ಹೊರಹಾಕಿ
ಸಂಸಾರಿಯಾಗಲಿ ಸನ್ಯಾಸಿಯಾಗಲಿ
ಮಾಡುವುದೆಲ್ಲ ಹೊಟ್ಟೆಗಾಗಿ
ಗೇಣು ಬಟ್ಟೆಗಾಗಿ ಎಂದೆಚ್ಚರಿಸಿದವ
ಧರ್ಮ-ದೇವರು, ಮೇಲು-ಕೀಳು
ಕುಲದ ಪ್ರಶ್ನೆ ಸಿಡಿಸುವವಗೆ
ಆತ್ಮದ ಕುಲದ ರಹಸ್ಯ
ಬಯಲಾಯಿಸೆಂದು ಸವಾಲೆಸೆದವ
ದ್ವೇಷ, ಅಸೂಯೆ, ಮತ್ಸರ
ಮೋಹದ ಪಾಶದಿಂದ ಹೊರಬರಲು
ಕೇಡನ್ನು ಬಯಸದೇ ನೋಯಿಸಿದವರ
ಉದ್ಧಾರ ಮನದಲ್ಲಿ ನೆನೆದವ
ಬೇಡಿದ್ದನೀವ ಕೇಶವ ನಿನಗೆ
ಏನು ಬೇಡುವುದು ದೊರೆಯೆಂದು
ಜ್ಞಾನದ ಭಿಕ್ಷೆಯನ್ನು ಸದಾ
ಅನುಗ್ರಹಿಸೆಂದು ಮಂಡೆಯೂರಿದವ
ಕಾಗಿನೆಲೆಯಾದಿಕೇಶವನ ನೆನೆಯುತ್ತ
ಜೀವನ ಅನಿವಾರ್ಯ, ನೋವು ಅನ್ನದೆ
ಬಂದದ್ದನ್ನು ಎದುರಿಸಿ, ಒಲ್ಲೆನದೇ
ಮುಕ್ತಿಯ ಮಂಟಪದ ದಾರಿ ತೋರಿದವ
0 ಪ್ರತಿಕ್ರಿಯೆಗಳು