**
ಅಂಕಣಕಾರ, ಸಾಮಾಜಿಕ ಚಿಂತಕ ಚಂದ್ರಪ್ರಭ ಕಠಾರಿ ಅವರ ಹೊಸ ಕೃತಿ ‘ಕಠಾರಿ ಅಂಚಿನ ನಡಿಗೆ’ ಬಿಡುಗಡೆಯಾಯಿತು.
ರಾಜಕೀಯ ವಿಶ್ಲೇಷಕ ಶಿವಸುಂದರ್ ಪುಸ್ತಕ ಬಿಡುಗಡೆ ಮಾಡಿದರು.
“ಮಾನವತೆಯು ಮಸಣ ಸೇರುವ ಈ ಹೊತ್ತಿನಲ್ಲಿ ಸತ್ಯ ಮಾತನಾಡುವುದೇ ಕಷ್ಟವಾಗಿದೆ” ಎಂದು ಶಿವಸುಂದರ್ ವಿಷಾದಿಸಿದರು.
ಈ ಸಂದರ್ಭದಲ್ಲಿ ಕೃತಿಯ ಲೇಖಕರಾದ ಚಂದ್ರಪ್ರಭ ಕಠಾರಿ, ‘ಅವಧಿ’ ಸಂಪಾದಕರು ಹಾಗೂ ಹಿರಿಯ ಪತ್ರಕರ್ತರಾದ ಜಿ ಎನ್ ಮೋಹನ್, ಬರಹಗಾರರಾದ ನಾಗರಾಜ್ ಶೆಟ್ಟಿ, ಹಿರಿಯ ಪತ್ರಕರ್ತೆ ಡಾ ವಿಜಯಮ್ಮ, ನಾಗೇಗೌಡ ಕಿಲಾರ, ಹೋರಾಟಗಾರ ಎಚ್ ಸಿ ಉಮೇಶ್, ಚಿಕ್ಕು ಕ್ರಿಯೇಷನ್ಸ್ ಪ್ರಕಾಶಕರಾದ ಸುಷ್ಮಾ ಕಠಾರಿ, ಯುವ ಪತ್ರಕರ್ತ ಯತಿರಾಜ್ ಬ್ಯಾಲಹಳ್ಳಿ, ಮಹಾಲಕ್ಷ್ಮಿ ಹಾಗೂ ಡಾ ಪ್ರತಿಮಾ ವಿಜಯ್ ಹಾಜರಿದ್ದರು.
ಈ ಕಾರ್ಯಕ್ರಮದ ಫೋಟೋ ಆಲ್ಬಂ ಇಲ್ಲಿದೆ.
0 ಪ್ರತಿಕ್ರಿಯೆಗಳು