ಎಸ್ ಜಿ ಸಿದ್ದರಾಮಯ್ಯ ಹೊಸ ಕವಿತೆ- ಹೇಗೆ ಬರೆಯಲಿ ಕವಿತೆ?…

ಎಸ್ ಜಿ ಸಿದ್ದರಾಮಯ್ಯ

ನಾನು ಕವಿತೆ ಬರೆಯುವುದ ಬಿಟ್ಟು ಬಹಳ
ಕಾಲವಾಯಿತು ಗೆಳೆಯ.ರೂಪಕಗಳು ಸತ್ತು
ನುಡಿಗಟ್ಟುಗಳು ಉಸಿರು ಕಳೆದುಕೊಂಡಿವೆ
ಹೇಗೆ ಬರೆಯಲಿ ಕವಿತೆ?

ಭಯ ಆತಂಕ ಅನುಮಾನಗಳು ಅಬ್ಬರಿಸಿವೆ
ಹಾದಿ ಬೀದಿಗಳಲ್ಲಿ ಧರ್ಮಗಳು‌ ಕೇಕೆ ಹಾಕಿವೆ
ಪಡ್ಡೆಗಳು ಕೇಸರಿಯ ಅಡ್ಡದ ದಾಳಗಳಾಗಿವೆ
ಸುಳ್ಳುಗಳು ವೈಹಾಳಿಯಲಿ ಕೆನೆಯುತ್ತಿವೆ

ಕೂಡೊಟ್ಟಿನ ಕುಟುಂಬಗಳೆಲ್ಲ ಜಾಡುತಪ್ಪಿವೆ
ತೋಟತುಡಿಕೆಯ ಕುಡುಗೋಲು ಕೊಡಲಿಗಳು
ನಡುರಸ್ತೆಗೆ ಬಂದು ಗಬ್ಬರಿಸಿ ಠಳಾಯಿಸುತ್ತಿವೆ
ಸಂಬಂಧಗಳು ಸೋತು ಸೊರಗಿವೆ

ಕಲಿವ ಶಾಲೆಗಳಲ್ಲಿ ಕೇಸರಿ ಹಿಜಾಬುಗಳ ದ್ವೇಷ
ನಡೆವ ದಾರಿಗಳಲ್ಲಿ ಅಲ್ಲಾ ರಾಮರ ವಿದ್ವೇಷ
ಮಾತಿನ ಬೆಂಕಿಗೆ ಉರಿಯುತ್ತಿವೆ ಗುಡಿಸಲುಗಳು
ಕಾಣದ ಮುಖಗಳ ಕರಾಳ ನರ್ತನ

ಬರೆದ ಅಕ್ಷರಗಳು ಅರ್ಥವಿಲ್ಲದ ಬಣಗು
ಸೂತ್ರವಿಲ್ಲದ ಮಾತು ಪಾತ್ರವಿಲ್ಲದೆ ಹೋತು
ನೆಲ ಹತ್ತಿ ಉರಿಯುತಿದೆ ಜಲ ಬತ್ತಿ ಹೋಗುತಿದೆ
ಹೇಗೆ ಬರೆಯಲಿ ಕವಿತೆ ಹೇಳು ಗೆಳೆಯಾ?

‍ಲೇಖಕರು Admin

March 9, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. T S SHRAVANA KUMARI

    ವಾಸ್ತವವನ್ನು ಬಿಂಬಿಸಿದ ಕವಿತೆ

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: