ಡಾ ಕೆ ಷರೀಫಾ ಹೊಸ ಕವಿತೆ- ದ್ವೇಷದ ಅಗ್ನಿಗೆ ದೇಶ ಬಲಿಯಾಯ್ತು…

ಡಾ ಕೆ ಷರೀಫಾ

ದ್ವೇಷದ ಅಗ್ನಿ ಉರಿಯುತ್ತಿದೆ.
ಊರು ಮಸಣ ಮಾಡಿತು ಬಾಂಬು

ದಟ್ಟ ವಸತಿಗಳ ಅಳಿಸಿ ಹಾಕಿ
ನೆಲಸಮ ಗುಡಿ, ರ್ಚು, ಮಸೀದಿ
ನೋವಿನ ಚಿತ್ಕಾರ ಮುಗಿಲು ಮುಟ್ಟಿ
ಕರಕಲು ಛಿದ್ರ ಮಕ್ಕಳ ದೇಹಗಳು.

ಸುರಿವ ಬಾಂಬಿನ ಮಳೆಗೆ ಬೆದರಿದ
ಚಿಣ್ಣರು ಓಡೋಡಿ ಬಂದರು ಬಯಲಿಗೆ
ಜೀರೋ ಡಿಗ್ರಿ ಚಳಿಗೆ ಸೆಟೆದ ಶವಗಳು
ಕಡು ರಾತ್ರಿ ಸೂರ್ಯ ಹುಟ್ಟುವ ಮುನ್ನ
ಉರಿದುರಿದು ಬೂದಿಯಾದ ಬೆಳದಿಂಗಳು.

ದ್ವೇಷದ ಅಗ್ನಿಗೆ ದೇಶ ಬಲಿಯಾಯ್ತು
ಯುದ್ಧ ಕಾಲದಲ್ಲಿ ನನ್ನೊಳಗಿನ ಬುಧ್ಧ
ಸತ್ತು ಸಮಾಧಿ ರಕ್ತ, ಕೀವು, ನಂಜಾಗಿತ್ತು
ತಿನ್ನುವ ಅನ್ನ ದೇವರು ವಿಷವಾಗಿತ್ತು
ಬಾಂಬು ಬಿದ್ದು ಊರು ಬೂದಿಯಾಗಿತ್ತು.

ನೆಲತಬ್ಬಿ ಬಿಕ್ಕಳಿಸಿ ಗಾಂಧಾರಿಯ ರೋದನ
ದಾಳಿಯಲಿ ಪುಡಿಯಾದ ಗೋಡೆಗಳಡಿ
ನೂರು ಶವಗಳ ತಬ್ಬಿ ಅಳುತ್ತಿದ್ದಾಳೆ ಅಮ್ಮ
ಹಿರೋಶಿಮಾ ನಾಗಾಸಾಕಿ ಬಂಜರಾಗಿದ್ದಕ್ಕೆ
ನೆಲದೆದೆ ಬಿರಿವಂತೆ ಬಿಕ್ಕುತ್ತಿದ್ದಾಳೆ ತಾಯಿ.

ಬಹಳ ಶಕ್ತಿಯಿದೆ ಯುದ್ಧಗಳಿಗೆ
ಜೀವ ಸಾಯಿಸುತ್ತದೆ; ಸೃಷ್ಟಿಸುವುದಿಲ್ಲ
ಕಸಿಯುತ್ತದೆ ಕನಸು; ಕಾಣಿಸುವುದಿಲ್ಲ
ಮತಗಳ ಬಂಪರ ಬೆಳೆಯ ಇಳುವರಿ
ಹೆಣ ದೇಶವಾಗುವುದು ಮಾತ್ರ ಖಾತರಿ.

‍ಲೇಖಕರು Admin

March 9, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: