’ಎಲೆಗೆ ಉದುರುವ ಸಂಕಟ…’ – ಟಿ ಎಸ್ ಗೊರವರ ಕವಿತೆ

ಸಂಭ್ರಮದ ಕಾಲ್ಗೆಜ್ಜೆ ಕಳಚಿ ಹೋಗಿದೆ

ಟಿ ಎಸ್ ಗೊರವರ

ತೂರುವ ರಾಶಿಯಂತೆ ಸುರಿಯುತಿದೆ
ಅಂಗಳದಲ್ಲಿ ಬೆಳುದಿಂಗಳು
ಸೆರಗು ಬೀಸುತಿದೆ ತಂಗಾಳಿ
ಬಾಳೆಯ ನರಳಿಕೆ, ಊಳಿಡುವ ನರಿ
ಎಲೆಗೆ ಉದುರುವ ಸಂಕಟ
ಹಬ್ಬವಿಲ್ಲ ಉಮ್ಮಳಿಕೆಗೆ

ಸುಟ್ಟು ತಿನ್ನಲು ಹದಗೊಂಡಿದೆ
ಕಣದ ರಾಶಿಯಲ್ಲಿ ಎತ್ತಿದ ಪುಟ್ಟಿ ಶೇಂಗಾ
ನಂಜಿಕೊಳ್ಳಲು ಬೆಲ್ಲ, ಸುಟ್ಟ ಹಸಿ ಮೆಣಸಿನಕಾಯಿ
ಇಲ್ಲ, ರುಚಿಯಾಗುತ್ತಿಲ್ಲ
ಗಂಟಲೊಳಗಿನ ಬಿಕ್ಕು ಹಾಗೇ ಇದೆ
 
ಆಕಳಿಗೆ ಚೊಚ್ಚಲು ಹೆರಿಗೆ
ಕರುವಿನ ಕಣ್ಣೊಳಗೆ ನಕ್ಷತ್ರ ಹೊಳಪು
ಅಡುಗೆ ಮನೆಯಲ್ಲಿ ಗಿಣ್ಣದ ತಯಾರಿ
ಉಂಡರೆ ಸಪ್ಪ ಸೆದೆ
ನಾಲಿಗೆಯೊಳಗೆ ರುಚಿಯ ಗುರುತಿಲ್ಲ
 
ಕುಣಿತ ಹಾಕಿದ್ದ ಸಂಭ್ರಮದ ಕಾಲ್ಗೆಜ್ಜೆ ಕಳಚಿ ಹೋಗಿದೆ
ಮತ್ತೆ ಗೆಜ್ಜೆ ಕಟ್ಟುವುದೇ ? ಕುಣಿತ ಹಾಕುವುದೇ ?
 

‍ಲೇಖಕರು avadhi

August 30, 2013

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

6 ಪ್ರತಿಕ್ರಿಯೆಗಳು

  1. nagraj.harapanahalli

    ತೂರುವ ರಾಶಿಯಂತೆ ಸುರಿಯುತಿದೆ
    ಅಂಗಳದಲ್ಲಿ ಬೆಳುದಿಂಗಳು
    ಸೆರಗು ಬೀಸುತಿದೆ ತಂಗಾಳಿ
    – ಈ ಸಾಲುಗಳು ತುಂಬಾ ಇಷ್ಟವಾದವು ಗೊರವರ್

    ಪ್ರತಿಕ್ರಿಯೆ
  2. g.n.nagaraj

    ಈ ವರ್ಷದ ಉತ್ತಮ ಕವಿತೆ ಎಂಬ ಮಾತು ಬಸ್ಸಿಗೆ ಓಡುತ್ತಿದ್ದ ಻ವಸರದಲ್ಲಿಯೂ ಕವಿತೆಯನ್ನು ಓದಲು ಒತ್ತಾಯಿಸಿತು. ಉತ್ತಮ ರೂಪಕಗಳ ಮೂಲಕ ಸಂಭ್ರಮ ಕಳೆದು ಹೋದದ್ದರ ಬಗ್ಗೆ ಅಭಿವ್ಯಕ್ತಿಸಿದ್ದೀರಿ.ಕಳೆದು ಹೋದ ಸಂಭ್ರಮ ಯಾವುದು ಎಂಬ ಬಗ್ಗೆ ಯೋಚಿಸ ಹಚ್ಚಿದ್ದೀರಿ.ಸ್ವಾತಂತ್ರ್ಯ ದಿನಾಚರಣೆಯ ಬೆನ್ನಲ್ಲಿ ಬಂದ ಕವನ ಇದು ಎಂದು ಒಂದು ಅರ್ಥ ಮೂಡುತ್ತಿದೆ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: