ಕಾವ್ಯಶ್ರೀ ಎಚ್
ಇಲ್ಲಿ ಮನೆಯೊಳಗೆ ಶಾಂತಿ ನೆಮ್ಮದಿಗಳು ಮಾಯವಾಗಿವೆ
ಅಲ್ಲಿ ಮನೆಗಳೇ ಮಾಯವಾಗಿವೆ
ಇಲ್ಲಿ ನಂಬಿಕೆ ವಿಶ್ವಾಸ ಪ್ರೀತಿ ಅನುನಯಗಳನ್ನು ಎಂದೋ ಮೂಟೆಕಟ್ಟಿ ಎಸೆದಿದ್ದಾರೆ
ಅಲ್ಲಿ ಬೀದಿ ಬೀದಿಗಳಲ್ಲಿ ಜನ ಪ್ರೀತಿಯ ಹಂಚುತ್ತಾರೆ ನಂಬಿಕೆಯ ನೆಡುತ್ತಾರೆ ಮನ ಮನಗಳಲ್ಲಿ
ಇಲ್ಲಿ ನೂರು ಬಣ್ಣ ನಗುವಿಗೆ ನೂರು ಭಾವ ನೋವಿಗೆ
ಅಲ್ಲಿ ಹರಿವ ರಕ್ತಕ್ಕೆ ಹೆಸರಿಲ್ಲ ಕಣ್ಣೀರಿಗೆ ಬಣ್ಣವಿಲ್ಲ
ಮನದ ಮೂಲೆಮೂಲೆಗೂ ಬೀಗ ಜಡೆವ ಮೂಢರಿಲ್ಲಿ
ಕೀಲಿಕೈಗಳ ಎದೆಗೂಡಿನಲ್ಲಿ ಜೋಪಾನ ಮಾಡುವ ಮಾಂತ್ರಿಕರಲ್ಲಿ
ಬನ್ನಿ ಬನ್ನಿ ಜನಗಳೇ ಮನೆಯಿಲ್ಲದೆಯೂ ಮನದಲ್ಲಿ ನೆಲೆಯೂರುವ ಪಾಠ ಹೇಳಿಬನ್ನಿರಿ
ಸಮುದಾಯ ರಂಗತಂಡ ಚಿತ್ರಕಲಾ ಪರಿಷತ್ ನಲ್ಲಿ ಹಮ್ಮಿಕೊಂಡಿದ್ದ ಪ್ಯಾಲೆಸ್ಟೈನ್ ಜಾಥಾ ರಂಗ ಕಾರ್ಯಕ್ರಮ ನೋಡಿ
Nice poem…. siriya nenapaytu yako
Thank you sir. ಹರಿವ ರಕ್ತಕ್ಕೆ ಹೆಸರಿಲ್ಲ ಕಣ್ಣೀರಿಗೆ ಬಣ್ಣವಿಲ್ಲ