ಎಚ್ ಆರ್ ರಮೇಶ
ದುಃಖವನ್ನು ಬಿಕರಿಗಿಡುವುದಿಲ್ಲ
ಕವಿತೆಯಲ್ಲಿ
ವ್ಯಥೆಯ ಪಾಡನ್ನು
ಹೇಳುವುದಿಲ್ಲ
ಕಡ ತಂದು ರೂಪಕಗಳ
ಬದುಕಿನ ಗತಿಯ ಅಳೆವ ಧಾರ್ಷ್ಟ್ಯವೇತಕೆ?
ಇರುವುದು ಇರುವುದಿಲ್ಲ
ಆದರೂ ನೋವು
ಒಳ ಸುಳಿ
ಕಾಣದೆ ಸುತ್ತಿಕೊಳ್ಳುವುದು,
ಹೇಳಿದರೆ ತೀರುವುದಿಲ್ಲ
ಮೊಗೆದು ಹಾಕಲು
ಹೊರ
ತುಂಬಿದೆ
ತುಳುಕುತಿದೆ
ದಕ್ಕಿರುವ
ಇಷ್ಟು
ಬದುಕು
ಹಿಗ್ಗುತ್ತಲೇ
ಇದೆ
ಅದರಿಂದ
ಹಿಗ್ಗಿದಷ್ಟು
ದುಃಖ ಹಬ್ಬುತ್ತಲೇ ಇದೆ.
0 ಪ್ರತಿಕ್ರಿಯೆಗಳು