ಎಂ ವಿ ಶಶಿಭೂಷಣ ರಾಜು ಕವಿತೆ- ಮಾಡಲೇ ಬೇಕಾದ ಪಯಣ…

ಎಂ ವಿ ಶಶಿಭೂಷಣ ರಾಜು

ನಟ್ಟಿರಿಳು, ಅಂಧಕಾರ
ಮೋಡ ನೀರಾಗುತ್ತಿರುವ ಸಮಯ
ಗಾಳಿಯನ್ನೆಲ್ಲಾ ಆಪೋಶನೆ ತೆಗೆದುಕೊಂಡು
ಬಿರುಗಾಳಿ ಮಾಡಿ ಒಂದು ನೋವ ಚೀತ್ಕಾರ
ಒಂದು ಚಮತ್ಕಾರ
ಒಂದು ಜನನ

ಒಂದು ಸಣ್ಣ ಹೆಜ್ಜೆ,ಒಂದು ಲಂಘನ
ಜೀವಜಗದ ಕಂಪನ
ಕಣ್ಣಗಲಿಸಿ, ಕುತೂಹಲದ ಸಪ್ಪಳ
ಸೆಳೆಯಲು ಗಮನ
ಸೊಂಪಾದ ನಿದಿರೆ, ಮಡಿಲಿನಾಸರೆ
ಶುರುವಾದ ಜೀವನ

ಕಣ್ಣುಕುಕ್ಕುವ ಸುಂದರ ಆಕೃತಿಯ
ನೋಡುವ ಕ್ಷಣ
ಕಲ್ಲು ಕುಟ್ಟಿ ನೀರ ತೆಗೆಯುವ
ಗಟ್ಟಿ ಜವ್ವನ
ನೆಲಕಾಣದ, ದೇಶಕಾಣದ
ಮುಂದುವರೆದ ಯಾನ

ಮನಕಡರಿದ, ಮನದಜೊತೆಗೆ
ಹೊಸದಾರಿ
ಅರಿವಿಲ್ಲದೆ, ಮೊಗ್ಗು ಹೂವಾಗಿ, ಕಾಯಾಗಿ
ಅಂಗೈಯಲ್ಲಿ ಹಣ್ಣು
ತನ್ನ ಇರುವಿಕೆ ಶೂನ್ಯಗೊಳಿಸಿ
ನೆಟ್ಟಿದ ಕಣ್ಣು

ಉರುಳುತ್ತವೆ ವರುಷ, ಹರುಷ ವಿರಸದಲಿ
ಪ್ರಜ್ಞಾಹೀನ ಪಥದಲಿ
ಹಿಂತಿರುಗಿದರೆ ನೋಡಿದರೆ ಇರದ ಹೆಜ್ಜೆ ಗುರುತು
ಅಚ್ಚರಿ,ಪುಟ್ಟಪಾದಗಳು ವಾಮನಾವತಾರ ತಾಳಿದ ಪರಿಗೆ
ಶೂನ್ಯಸಾದನೆಯ ವೇದನೆ
ಮುಗಿಯಲು ಬಂದ ಕಥೆ

ಮತ್ತೆ ಮಗುವಾಗುವ ಸಮಯ
ತನ್ನ ಅವತಾರ ತನ್ನೆದಿರು ಅವತರಿಸಿದಂತೆ
ಕ್ಷೀಣಿಸಿದ ನೋಟಕ್ಕೆ ಒಂದು ಬೆಳಕು
ತನಗೇ ಕೊಟ್ಟುಕೊಂಡ ಇನಾಮು
ಕತ್ತಲು ಬೆಳಿಕಿನಾಟದ ದಿನಗಳು
ಎಚ್ಚರ ತೂಕಡಿಕೆಯ ಕ್ಷಣಗಳು

ಬರುತ್ತದೆ ಒಂದು ದಿನ, ಕೂಗಿಗೆ
ಕಾಯುತ್ತಿರುವಾಗ
ತನಗಾಗಿ ಸೃಷ್ಟಿಸಿದ ನವಹಾದಿಗೆ
ಹೊರಳಲು
ಸುಮ್ಮನೆ ಎಣಿಸುತ್ತಿರುವುದು ದಿನಗಳ
ಮುಗಿಯುತ್ತದೆ ಕಾಲ
ಪ್ರಾರಂಭವಾಗುತ್ತದೆ ಒಂಟಿಯಾನ
ಮಾಡಲೇ ಬೇಕಾದ ಪಯಣ  

‍ಲೇಖಕರು avadhi

March 24, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: