ಉಷಾ ನರಸಿಂಹನ್ ಹೊಸ ಕವಿತೆ – ಸಂಜೆಯೊಲವು

ಉಷಾ ನರಸಿಂಹನ್

ಹೋಗಬೇಡ ನಲ್ಲ ನನ್ನ
ಮನಸು ತುಂಬುವನಕ;
ಸ೦ಜೆಗಣ್ಣ ಒಲವಬಣ್ಣ
ಒಡಲಿಗಿಳಿವ ತನಕ!
ಹೆಪ್ಪುಗಟ್ಟುತಿಹುದು ಹೊತ್ತು
ಕದಲಿ ಕೆಡಿಸಬೇಡ.

ಹುತ್ತಗಟ್ಟುತಿವುದು ಚಿತ್ತ
ಭಂಗಿ ಬದಲಬೇಡ!
ಹೂವಿನೆದೆಗೆ ಹನಿಯು ಬಿದ್ದು
ಸೋರಿ ಹೋದ ಹಾಗೆ…
ಸನಿಹ ಬಂದ ಇನಿಯ ನೀನು
ಜಾರಿ ಹೋಗಬೇಡ

ಗಳಿಗೆಗಳು ಕೂಡಿಕೊಳುತ
ಹೊತ್ತು ಮೀರಿ ಹೋಗಲಿ,
ಎದೆಯ ಬಡಿತ ತೀರವಾಗಿ
ಒಡಲ ಕಡಲ ಸೇರಲಿ.

ಇನಿತು ಭಿನ್ನ ಬೇಧವಿಲ್ಲ
ನನ್ನ ನಿನ್ನ ನಡುವೆ!
ಎನಿತು ಚನ್ನ ಸಮಯ ಹೊನ್ನು
ನಮ್ಮಿಬ್ಬರ ಒಡವೆ!

ಗಾಳಿ ಬೀಸುತಿಹುದು ನಡುವೆ
ಮೋಹ ಚಳಿಯ ಸುಯ್ಯುತಾ…
ಪಾಳಿಗಾಗಿ ಕಾಯುತಿಹುದು
ಅಂಗಾಗವು ಬೇಯುತಾ…

‍ಲೇಖಕರು Admin

May 27, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: