ಸದಾಶಿವ್ ಸೊರಟೂರು ಹೊಸ ಕವಿತೆ – ವೈನು ಮೆತ್ತಿದ ತುಟಿಗಳು..

ಸದಾಶಿವ್ ಸೊರಟೂರು

ನನ್ನನ್ನು ಬೆಚ್ಚಿಬೀಳಿಸುವ
ಪದಗಳಿಂದ ಹೆಣೆದ
ಆ ಕವಿತೆಯ ಪುಸ್ತಕ ಎತ್ತಿಟ್ಟೆ
ಅವು ನನ್ನನ್ನು ಯಾವುದೇ ಸಮಯದಲ್ಲಿ
ಕೊಲ್ಲಬಹುದು..

ಹೊರಗೆ ಮಳೆ ಅಳುತಿದೆ
ಕಣ್ಣೀರಲ್ಲಿ ಮನ ಬೆಚ್ಚಗೆ..

ಫ್ರಿಡ್ಜ್ ನ ಬಾಗಿಲು ತೆರೆದು
ವೈನಿನ ಬಾಟಲು ಹೊರಗೆಳೆದು
ಕಡು ಕಣ್ಣೀರಲಿ ತೊಳೆದ
ನಡು ಸಣ್ಣಗಿನ ಬಟ್ಟಲಿಗೆ
ಸುರಿದುಕೊಂಡೆ
ಢಾಳ ಕೆಂಪನೆ ವೈನು
ತುಟಿ ಕುರಿತಾಗಿ ಅವಳುಬರೆದ ಕವಿತೆ ಸಾಲು
ನೆನಪಾಗಿ ತಿವಿಯಿತು ಬಟ್ಟಲಿನ ಅಂಚು..

‘ವೈನು ಒಳ್ಳೆಯದಲ್ಲ’ ಇದು ಶಾಸನ ವಿಧಿಸಿದ
ಎಚ್ಚರಿಕೆ!!

ಕವಿತೆಯನ್ನ ಯಾಕೆ ಇನ್ನೂ ಹೊರಗಿಟ್ಟಿದ್ದಾರೆ!?
ಯಾಕೆ ಯಾರೂ ದೂರು ನೀಡಿಲ್ಲ..!
ಸರ್ಕಾರದ ಮೌನಕ್ಕೆ ನನ್ನ ಧಿಕ್ಕಾರ.!!

ಮೂಗು ಮುಚ್ಚಿಕೊಂಡು ಟವಲು
ಮರೆಯಲಿ ಕುಡಿಯಬಾರದು ವೈನು
ಬೆವರ ಹನಿ ಬೆನ್ನಲ್ಲಿ‌ ಹುಟ್ಟಿ ಹೊಟ್ಟೆ ಮೇಲೆ
ಬಿದ್ದು ಅಲ್ಲಿಂದ ಸೊಂಟ ಬಳಸಿ
ಜಾರುವಂತೆ
ಒಳಗಿಳಿಯಬೇಕು;
ಕವಿತೆಯಾದರೇನು..,
ವೈನಾದರೇನು..

ಕವಿತೆಯ ಸಾಲುಗಳಿಂದ ತಿವಿಸಿಕೊಂಡು
ಯಾವುದೊ ಪುಟದಲ್ಲಿ
ಪ್ರಜ್ಞೆ ತಪ್ಪಿ ಬೀಳಬಹುದು
ವೈನು ಕೂಡ ಕೆಡವಬಹುದು
ಬಿದ್ದವನಷ್ಟೆ ಏಳಬಹುದು..
ಕವಿತೆಗೆ ಸೋತವನಿಗೆ ಮುಕ್ತಿ ಎಲ್ಲಿ!?

ಅವಳ ಕವಿತೆ ಓದಿದ ತುಟಿಗಳು
ಗಾಯಗೊಂಡಿವೆ
ವೈನು ಅವುಗಳ ಸಾಂತ್ವನಕಿಳಿದಿದೆ
ಶ್.. ಸುಮ್ಮನಿರಿ
ಹೊರಗೆ ಮಳೆ ಅಳುತ್ತಿದೆ
ಕಣ್ಣೀರಲಿ ಮನ ಬೆಚ್ಚಗಿದೆ
ಬಟ್ಟಲಲಿ ವೈನಿದೆ
ತುಟಿಗೆ ಕವಿತೆಗಳಿವೆ..

‍ಲೇಖಕರು Admin

May 27, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. ದೀಪಾ

    ನಿಮ್ಮ ವೈನ್ ಗಿಂತ ಅವಳ ಕವಿತೆಯೆ ನಶೆ ಹೆಚ್ಚಾಗಿದೆ..
    ಸುರಿದುಕೊಳ್ಳಿ
    ನಡುಬಟ್ಟಲ ದಾಟಿ ಕುತ್ತಿಗೆಯತನಕ

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: