ಟಿ ಕೆ ಗಂಗಾಧರ ಪತ್ತಾರ್
ಅಪ್ಪಟ ನಾಸ್ತಿಕನಾಗಿಯೂ ನಾನಿಲ್ಲಿ ಉಲ್ಲೇಖಿಸುತ್ತಿದ್ದೇನೆ, ಶಹನಾಯಿ ನವಾಝ್ ಉಸ್ತಾದ ಪಂಡಿತ್ ಬಿಸ್ಮಿಲ್ಲಾ ಖಾನರಿಗೆ ಕಾಶಿ ವಿಶ್ವನಾಥ ಹಾಗೂ ಗಂಗಾನದಿ ಎಂದರೆ ಪಂಚಪ್ರಾಣ.ಅಚಲ ವಿಶ್ವಾಸ-ಶ್ರದ್ಧೆ ಉಳ್ಳವರಾಗಿದ್ದರು. ಪ್ರತಿದಿನ ಬೆಳಗಿನ ಝಾವ ಸ್ನಾನ ಮಾಡಿ ಶುಚಿರ್ಭೂತರಾಗಿ ವಿಶ್ವನಾಥನ ಸನ್ನಿಧಿಯಲ್ಲಿ ಶಹನಾಯಿ ನುಡಿಸುವ ಮೂಲಕ ನಾದೋಪಾಸನೆ ಮಾಡುತ್ತಿದ್ದರು.
ಒಮ್ಮೆ ಪಾಕಿಸ್ತಾನದವರು -“ನೀವು ಹೇಳುವ ಸೌಕರ್ಯ-ಸೌಲಭ್ಯಗಳನ್ನೆಲ್ಲಾ ಒದಗಿಸುತ್ತೇವೆ, ಐಷಾರಾಮೀ ವ್ಯವಸ್ಥೆ ಕಲ್ಪಿಸುತ್ತೇವೆ. ಪಾಕಿಸ್ತಾನದಲ್ಲಿ ವಾಸಿಸಲು ಬಂದು ಬಿಡಿ”-ಎಂದರಂತೆ. ಆಗ ಖಾನ್ ಸಾಹೇಬರು ಒಂದು ದಮ್ ಬೀಡಿ ಎಳೆದು ಉಂಗುರ-ಉಂಗುರ ಹೊಗೆ ಬಿಡುತ್ತಾ ಒಂದು ಸ್ವಚ್ಛಂದ ಮುಗುಳು ನಗೆ ಸೂಸುತ್ತಾ ಹೇಳಿದರಂತೆ “ಮೊದಲು ನನ್ನ ತಂಬೂರಿ ಸಾಗಿಸಿಬಿಡಿ, ಆಮೇಲೆ ನಾನು ಖಂಡಿತಾ ಬರುತ್ತೇನೆ”.
“ಅಯ್ಯೋ! ತಾನ್ ಪುರಾ ಸಾಗಿಸೋದು ಏನು ಮಹಾ ಕೆಲಸ. ಎಲ್ಲಿದೆ ತೋರಿಸಿ”-ಎಂದಾಗ-ಅಷ್ಟೇ ಸಹಜವಾಗಿ ಮಂದಹಾಸ ಸೂಸುತ್ತಾ ಉಸ್ತಾದರು ತೋರುಬೆರಳು ಚಾಚಿ ಗಂಗಾನದಿಯನ್ನು ತೋರಿಸುತ್ತಾ “ಇದೇ ನನ್ನ ತಂಬೂರಿ. ಇದರ ಅಲೆ-ಅಲೆಗಳೂ ನನ್ನ ಶಹನಾಯಿ ಶ್ರುತಿಗೆ ಉಸಿರು ನೀಡುತ್ತವೆ ಎಂದಾಗ ಪಾಕಿಸ್ತಾನೀಯರು ನಿಬ್ಬೆರಗಾಗಿ ಮೌನ ತಾಳಿದರು.
ಗಿರಿ ಎತ್ತರದ ಬಿಸ್ಮಿಲ್ಲಾ ಸಾಹೇಬರ ಅಂತಃಕರಣದ ಮಾತುಗಳಿಗೆ ಸಲ್ಲಲಿ ನಮ್ಮೆಲ್ಲರ ಸಲಾಂ.
ಎಸ್.ಪಿ.ವಿಜಯಲಕ್ಶ್ಮಿ ……. ಎಂಥ ವ್ಯಕ್ತಿತ್ವ…! ಸರಳವಾಗಿ ಬದುಕಿ ಆ ಮೂಲಕ ಘನತತ್ವಗಳನ್ನು ಸಾರಿ, ಸಂಗೀತದ ಅನುರಣನದಲ್ಲಿ ಜೀವಂತರಾಗಿರುವ ಬಿಸ್ಮಿಲ್ಲಾಖಾನರಿಗೆ ಕೋಟಿನಮನಗಳು…..
Such are great hearts! Such people lived not only Sufi-ism but lived human-ism. Music, as everyone knows, bars religion, nations, and the Universe too. Music is universe and universe is music for such hearts. Hats off to such great hearts. They are all unique.
ಕಾಮೆಂಟ್ ಕಾಲಮ್ಮಿನಲ್ಲಿ ಪೋಸ್ಟ್ ಮಾಡಿದ್ದುದನ್ನು ಮುಖ್ಯಪುಟದಲ್ಲಿ ಪೇಸ್ಟ್ ಮಾಡಿದ “ಅವಧಿ”ಗೆ ಕೃತಜ್ಞತಾಪೂರ್ವಕ ಧನ್ಯವಾದಗಳು.