ಆಶಾ ಜಗದೀಶ್ ಹೊಸ ಕವಿತೆ- ಅವಳು ಮತ್ತು ಬಯಲು

ಆಶಾ ಜಗದೀಶ್

—–

ರಸ್ತೆಯಂಚನ್ನು ಒದ್ದೆಯಾಗಿಸುತ್ತಿವೆ

ಅವಳ ಒದ್ದೆ ಕಣ್ಗಳು

ಯಾವ ಭಾವವನ್ನೂ ಹೊರಚೆಲ್ಲದಂತೆ

ಗಂಭೀರವಾಗಿ ನಡೆಯುತ್ತಿರುವ

ಅವಳ ಮೈಮನಗಳಲ್ಲಿ

ಈ ಕಣ್ಣುಗಳೇ

ಕ್ಲಾಸ್ ಬಂಕ್ ಮಾಡಿದ ಮಕ್ಕಳಂತೆ

ಸರಿಯಾಗಿ ಪಾಠ ಕಲಿತಿಲ್ಲ

ಎಷ್ಟೊಂದು ಜನ

ಆದರೆ ಪುಣ್ಯಕ್ಕೆ ಯಾರಿಗೂ ಅವಳ 

ಕಣ್ಣ ತೇವ ಕಾಣುತ್ತಿಲ್ಲ

ಗಂಭೀರ ವದನದ ಹಿಂದಿನ

ಅಳು ಮೋರೆಯ ಸುಳುಹನ್ನು

ಯಾರೂ ಗುರುತಿಸುತ್ತಿಲ್ಲ

ಈ ಸುಡುಗಾಡು ಊರಿಗೆ

ಹೊತ್ತು ಗೊತ್ತಿಲ್ಲದೆ ಗಂಟುಮೂಟೆ 

ಕಟ್ಟಿಕೊಂಡು

ಬಂದುಬಿಡುವ ಮಳೆಗೆ

ಅವಳ ಅಶ್ರು ಹನಿಗಳಲ್ಲಿ

ಲೀನವಾಗುವ ತವಕ

ಚಂಡ ಮಾರುತಗಳೆಷ್ಟೋ

ಬಂದು ಗದ್ದಲವೆಬ್ಬಿಸಲಿ

ಎಂದೇ ಪ್ರಾರ್ಥಿಸುತ್ತಾಳೆ

ಅವಳು…

ಅವಳ ಬಲಗಿವಿಯ ಓಲೆ ಎಲ್ಲೋ 

ಉದುರಿಹೋಗಿದೆ

ಕೆದರಿದ ಕೂದಲ ನಡುವೆ ಸಿಕ್ಕಿಕೊಂಡ

ಒಂದು ಒಣ ಕೆಂಗುಲಾಬಿ

ಸತ್ತು ಹೆಣವಾಗಿದೆ

ತುಟಿಯ ಎಡಭಾಗ ಹರಿದು

ರಕ್ತ ತೊಟ್ಟಿಕ್ಕುತ್ತಿದೆ

ಮತ್ತದನ್ನು ನೆಕ್ಕಿ ಚಪ್ಪರಿಸುತ್ತಿರುವ

ನಾಲಿಗೆಯೊಂದು ಮಿಡಿನಾಗರವಾಗಿ

ಹೆಡೆ ಎತ್ತಿ ಬುಸುಗುಡುತ್ತಿದೆ

ಅವಳು 

ನೂಲುಗಳ ಹರಿದು

ಹಂಗು ತೊರೆದು

ಗೋಡೆಗಳಿಲ್ಲದ

ಮುಳ್ಳುಕಂಟಿಯ 

ಬೇಲಿಗಳಿಲ್ಲದ 

ಬಯಲಲ್ಲಿ

ಪುಟ್ಟ ನಿವೇಶನ ಕೊಳ್ಳಲು

ತನ್ನಾತ್ಮವನ್ನು ಕಳಿಸಿದ್ದಾಳೆ

‍ಲೇಖಕರು avadhi

December 6, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: