ಆರೇನಹಳ್ಳಿ ಧರ್ಮೇಂದ್ರ ಕುಮಾರ್‌ ಜೊತೆ ‘ಫಟಾ ಫಟ್’‌

ಆರೇನಳ್ಳಿ ಶಿವಶಂಕರ ಧರ್ಮೇಂದ್ರ ಕುಮಾರ್‌ ಈಗ ‘ಸೋಶಿಯಲ್ ಮೀಡಿಯಾ ಡಾರ್ಲಿಂಗ್’.

ಸೋಶಿಯಲ್ ಮೀಡಿಯಾದಲ್ಲಿ ರಾತ್ರೋರಾತ್ರಿ ಮಿಂಚಿದವರು ಇದ್ದಾರೆ. ಆದರೆ ಧರ್ಮೇಂದ್ರ ಕುಮಾರ್ ಸೋಶಿಯಲ್ ಮೀಡಿಯಾದ ಮುಖ್ಯ ಸ್ಥಾನ ಆಕ್ರಮಿಸಿದ್ದರಲ್ಲಿ ವಿಶೇಷವಿದೆ.

ಏಕೆಂದರೆ ಇವರು ಆಯ್ಕೆ ಮಾಡಿಕೊಂಡದ್ದು ಚರಿತ್ರೆಯನ್ನು.

ಚರಿತ್ರೆ ಎಂದರೆ ಸಾಕು ರಾಜಮಹಾರಾಜರು ಎದ್ದ ಬಿದ್ದ, ಅಂಕಿ ಅಂಶಗಳ ಕಥೆ ಎಂದು ಮಾರು ದೂರವೇ ನಿಲ್ಲುವ ಕಾಲದಲ್ಲಿ ಧರ್ಮೇಂದ್ರ ಕುಮಾರ್ ಅತಿ ಪ್ರೀತಿಯಿಂದ ಮೈಸೂರಿನ ಚರಿತ್ರೆಯನ್ನು ನಮ್ಮ ಮನೆಯ ಕಥೇನೋ ಎನ್ನುವಂತೆ ಬಿಚ್ಚಿಡುತ್ತಿದ್ದಾರೆ.

ಹೀಗಾಗಿ ಇಂದು ಸೋಶಿಯಲ್ ಮೀಡಿಯಾದಲ್ಲಿ ಚರಿತ್ರೆಯ ಧರ್ಮೇಂದ್ರ ಕುಮಾರ್ ಎಂದೇ ಹೆಸರಾಗಿದ್ದಾರೆ.

ಇವರೊಂದಿಗೆ ಅವಧಿ ನಡೆಸಿದ ಫಟಾಫಟ್ ಸಂದರ್ಶನ ಇಲ್ಲಿದೆ.

೧) ಚರಿತ್ರೆ ತಿಳಿಸುವ ಆಸಕ್ತಿ ಹೇಗೆ ಹುಟ್ಟಿಕೊಂಡಿತು ?

 ನಾವು ಬಾಲ್ಯದಲ್ಲಿ ಇದ್ದಾಗ ಪ್ರತಿ ರಸ್ತೆಯಲ್ಲೂ ಅರಮನೆಯಲ್ಲಿ ಕೆಲಸ ಮಾಡುವವರು ಇದ್ದರು. ಅಲ್ಲಿಂದ ತುಂಬ ಕಥೆಗಳು ಬರ್ತಾಯಿದ್ವು ಅವುಗಳನ್ನ ಈಗ ವಿಡಿಯೋ ಮಾಡಿ ಜನರಿಗೆ ತಲುಪಿಸುತ್ತಾ ಇದ್ದೇನೆ.

೨) ಮೈಸೂರಿನ ಕಥೆಗಳು ಎಷ್ಟು ತೃಪ್ತಿ ನೀಡಿದೆ ?

 ಅತ್ಯಂತ ತೃಪ್ತಿ ನೀಡಿದೆ. ಇನ್ನೂ ಜನರಿಗೆ ಹೆಚ್ಚೆಚ್ಚು ಕೊಡಬೇಕು ಅನ್ನೋ ಜವಾಬ್ಧಾರಿ ಹೆಚ್ಚಿದೆ.

೩) ರಾಜ ಮಹಾರಾಜರು ನಿಮ್ಮ ಕನಸಿನಲ್ಲಿ ಬಂದು ತಮ್ಮ ಚರಿತ್ರೆಗಳನ್ನ ನಿಮಗೆ ತಿಳಿಸುತ್ತಾರಾ ?

 ನನಗೆ ಅತ್ಯಂತ ಇಷ್ಟದ ಮಹಾರಾಜ ನಾಲ್ವಡಿ ಪ್ರಭುಗಳು. ಕೆಲವೊಮ್ಮೆ ಕನಸಿನಲ್ಲಿ ಬರುತ್ತಾರೆ.

೪) ಕಥೆ ಹೇಳುವುದನ್ನು ಯಾರಿಂದ ಕಲಿತಿರಿ ?

 ಅಮ್ಮನಿಂದ.

೫) ಹಿಂದಿನ ಜನ್ಮದಲ್ಲೇನಾದರು ಮೈಸೂರು ಆಸ್ಥಾನದಲ್ಲಿ ಕಥಾಭಟರಾಗಿದ್ದಿರೇ ?

 ಇರಬಹುದು. ಒಬ್ಬ ಹಿರಿಯ ಜ್ಯೋತಿಷಿ ನೀನು ಕಳೆದ ಜನ್ಮದಲ್ಲಿ ಶ್ರೀರಂಗಪಟ್ಟಣದಲ್ಲಿ ರಾಜರ ಆಸ್ಥಾನದಲ್ಲಿ ಇದ್ದೆ ಎಂದು ಹೇಳಿದ್ದರು.

‍ಲೇಖಕರು Avadhi

September 4, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: