ಅಪ-ರೂಪ
ಮನೋಹರ ನಾಯಕ್
ಕೇರಿಯ ಹಾದಿಯಂಗಳದಲ್ಲಿ
ಹರಿದಾಡಿತು ಇಂದು ರಂಗವಲ್ಲಿ
ರಥವಿಳಿದು ಪಥಹಿಡಿದ ನೇಸರ
ಪವಡಿಸಿದ ನೋಡು ನೆರಳ ಚಿತ್ತಾರ
ಪವನ-ಅರುಣರ ಪಯಣಕೆ
ಇಂದಿವತ್ತು ಹಸಿರು ಪತಾಕೆ
ಇಬ್ಬನಿಯ ಇನಿದನಿಗೆ
ಹೊಸಬಿಂಬದ ಹಾಸೆ
ಅಳಿಲಿಗಿಂದು ರಾಮರಾಜ್ಯ
ಹಕ್ಕಿಗಳಿಗೆ ಸಲೀಂ-ಅಲಿ ಭಾಗ್ಯ
ಮತ್ಸಕನ್ಯೆ, ಚೆಲುವಾಂತರಿಗೆ
ಬೆಸ್ತ ಅಂಬಿಗನೂ ಚೆನ್ನಿಗ
ಮರ ತರುಗಳ ತವರಲಿ
ಹೂದುಂಬಿಗಳ ಕಲರವ
ಪಚ್ಚೆಯಾದೀತು ಪಾಚಿ
ದಿವಿಯಾದೀತು ಭುವಿ
ಅರಿತುಕೋ ಮನುಜ,
ಇಲ್ಲಾ.. ಅವಿತುಕೋ.
ಇದ್ದು ಇರಗೊಡು,
ಇಲ್ಲಾ.. ಅಪರೂಪನಾಗು!!
Manohara…… Endinate..