ಬುದ್ಧರಾಗುವುದೆಂದರೇ..
ಸ್ಪೂರ್ತಿ ಗಿರೀಶ್
ಹುಲ್ಲಿನ ದಳ ತಲೆಯೆತ್ತಿ ಹೆಮ್ಮರವನು
ಕೇಳಿದೆ
‘ಮೇಲೆ ಮಳೆಯಿದೆಯೇ
ಎಲ್ಲಿಂದಲೋ ತೇಲಿಬಂತಲ್ಲ
ಒಂದೇ ಹನಿ
ಏನದು
ನನಗೋ ದಾಹ
ನನ್ನ ರಕ್ತವನ್ನೇ ನಾನಿನ್ನೂ ಕುಡಿಯಲಾರೆ’.
ಎಲೆ ಎಲೆಯಾಗಿ
ಅಲೆ ಅಲೆಯಾಗಿ ಹೊಗೊಂಬೆಗಳಿಂದ
ಬೇರಿಗಿಳಿದ ಮರ
ಗರಿಕೆ ತುದಿಯ
ಕಿವಿಯಲ್ಲಿ ಉಸುರಿದೆ.
‘ಓಹ್! ಅದೊಂದು ಜೋರು ಮಳೆ
ನೀನಂತೂ ಕೊಚ್ಚಿ ಹೋಗಿರುತ್ತಿದ್ದೆ
ನಾನೇ ಆಕಾಶವನ್ನು ಬಾಚಿ
ಕುಡಿದುಬಿಟ್ಟೆ
ದುರ್ಬಲರ ರಕ್ಷಣೆ
ದೇವರು ನನ್ನಂತವರಿಗಿತ್ತ ಹೊಣೆ
ಕರುಳು ಬಗೆದಿಡು
ಒಂದೊಂದೇ ಹನಿರಕ್ತ
ಇಂಗಿ ಹೋಗಲಿ
ಮತ್ತೆಂದೂ
ನಿನಗೆ ದಾಹವಾಗುವುದಿಲ್ಲ
ಬುದ್ಧರಾಗುವುದಷ್ಟು ಸುಲಭವಲ್ಲ
ಈ ಬಯಲು ಆಲಯ
ಸುಖದ ಸಾವಿನ ತೇರು
ತೂರು ತರಗಾಗು ಹಗುರಾಗು
ದಾಹವನ್ನು ತೊರೆದು ಅಮರವಾಗು.
ಚೆನ್ನಾಗಿದೆ ಮೇಡಂ .
amaratheya daahavuu heege..ollhe kavya chitra
ಧನ್ಯವಾದಗಳು
bahala chennagide