ಬಿದಲೋಟಿ ರಂಗನಾಥ್
ಎದೆಯ ಹಾಡಿನ ಕಾವು
ಹಾರಿ ಹೋದ ಈ ಹೊತ್ತು
ಬಂಡಾಯದ ಕೊಂಡಿ ಕಳಚಿ
ಬಡವಾಯಿತು ನಾಡು
ಅಸ್ಪೃಶ್ಯತೆಯ ನಡು ಮುರಿದು
ಗುಡಿಗೋಪುರಗಳ ಮೈಲಿಗೆ ಕಳಚಿ
ಸೆಟೆದು ನಿಂತ ಅಣ್ಣನೋ ನೀನು
ನೀನು ಹಚ್ಚಿದ ಹೋರಾಟದ ಕಿಚ್ಚು
ದಲಿತ ಕೇರಿಗಳಲ್ಲಿ ದೀಪವಾಗಿ ಬೆಳಗಿ
ಗುಡಿಸಲುಗಳು ಉಸಿರಾಡಿ
ಗುಳಿಬಿದ್ದ ಕಣ್ಣುಗಳು
ಕಣ್ಣೀರನು ಆತುಕೊಂಡೇ
ಬದುಕು ನೀಸಿದ್ದು ಇತಿಹಾಸ
ಹಾದಿ ಮೇಲಿನ ಕೆಂಡ
ನಿಮ್ಮ ಕೈ ಸುಟ್ಟರು
ಬೊಬ್ಬೆಯಲೇ ಗೀಚಿದೆ
ನೀ ಕಿಚ್ಚತ್ತುವ ಕವನಗಳನ್ನು
ನೀನು ಬರೆದು ಹಾಡಿದ ಗೀತೆ
ಕಿವಿಯಲ್ಲಿರುವಾಗಲೇ
ನಡೆದು ಅದೃಶ್ಯರಾದರೇ
ಕಣ್ಣೀರು ಬಿಟ್ಟರೆ ಉಳಿದಿಲ್ಲ ಏನೂ.
0 ಪ್ರತಿಕ್ರಿಯೆಗಳು