ಹೊಸ ದಾರಿಯೊಂದು..

ಇಂದು ಶ್ರೀ ಶಿವಕುಮಾರಸ್ವಾಮೀಜಿ ಅವರ ಹುಟ್ಟುಹಬ್ಬ.

ಆ ಪ್ರಯುಕ್ತ ಕವಿತೆ
ಅಕ್ಷರ

ಸುನೀತ / ಕುಶಾಲನಗರ 

ಹಣತೆ ಹಚ್ಚಿ ತೈಲವನ್ನೂ ಎರೆದಿರುವಿರಿ
ಈಗ ಬೆಳಕಿನ ಪ್ರಭೆ ಊರಗಲ ಹಬ್ಬುತ್ತಿದೆ
ಎಲ್ಲರ ಕಣ್ಣುಗಳಲ್ಲೂ ಕನಸು ಜಿಗಿಯುತ್ತಿದೆ
ಅನ್ನ ಅಕ್ಷರಗಳೊಳಗೆ ಹೀಗೂ ಪವಾಡಗಳೇ !
ಓಡಲಾಗದಿದ್ದರೆ ನಡೆ, ನಡೆಯಲಾಗದಿದ್ದರೆ ತೆವಳು
ಕ್ರಿಯಾಶೀಲತೆಗೆ ಎಷ್ಟೊಂದು ಆಯಾಮಗಳು !
ಸದ್ದಿಲ್ಲದೆ ಕಲಿಸಿದ ಪಾಠ
ಹಾಗೆ ಎದೆಗಿಳಿದಿದೆ
ಹೊಸ ದಾರಿಯೊಂದು
ಅರಿವಿಲ್ಲದೆಯೇ ತೆರೆದುಕೊಳ್ಳುತ್ತಿದೆ

ಕತ್ತಲು ಕವಿಯುವುದು ಸಹಜ
ಬೆಳಕು ನಂದಬಾರದಷ್ಟೆ
ಅಲೆಗಳ ಅಬ್ಬರವಿಳಿತದ ನಡುವೆಯೂ
ಹುಟ್ಟು ಹಾಕುತ್ತಲೇ ಇರಬೇಕು
ಒಳಗೊಳಗೆ ಮೊಳೆಯುತ್ತಿದೆ
ಹೊಸದೊಂದು ಭಾವ
ನಿಮ್ಮುಸಿರು ನಿಂತಿದೆ
ಕೇಳಲು ಕಷ್ಟವಾಗುತ್ತದೆ
ನೀವು ಬಿಟ್ಟ ಗಾಳಿ ನಮಗೀಗ ಉಸಿರು
ಹಚ್ಚಿಟ್ಟ ಹಣತೆಯನ್ನು ಎದೆಯಿಂದ
ಎದೆಗೆ ದಾಟಿಸುವ ಕೆಲಸದಲ್ಲಿ
ನಾವೀಗ ನಿರತರಾಗಿದ್ದೇವೆ

‍ಲೇಖಕರು avadhi

April 1, 2019

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: