ಹೇಮಾ ಹೆಬ್ಬಗೋಡಿ ಅನುವಾದಿತ ಕವಿತೆ- ವಸಂತದ ಸತ್ಯ ಕಥೆ…

ಮೂಲ : ರಮುನೆ ಬ್ರಂಡ್ಜೈಟ್
ಕನ್ನಡಕ್ಕೆ : ಹೇಮಾ ಹೆಬ್ಬಗೋಡಿ

ನೋ ಪ್ರಾಬ್ಲಂ, ನೋ ಪ್ರಾಬ್ಲಂ
ಹುಚ್ಚು ಹಿಡಿಸುವಂತಿದೆ ಈ ವಸಂತ
ನನ್ನೊಡಲು ಅರಳುತಿದೆ
ಮರದಂತೆ ಚಿಗುರುತಿದೆ
ಆಪರೇಷನ್‌ ಥಿಯೇಟರಿನ ಆಗಸದಲ್ಲಿ ಪ್ರಖರ ನಕ್ಷತ್ರ ಬೆಳಕು
ಒಂದೇ ಆಸೆ
ಪ್ರಜ್ಞೆಯ ತಳಾತಳದಲ್ಲಿ ಮುಳುಗೇಳಬೇಕು..
ತಟ್ಟನೇ ಉಸಿರೆಳೆದುಕೊಂಡೆ
ಕಣ್ಬಿಡುವ ಮುನ್ನ ಕಂಡದ್ದು:
ನಮ್ಮ ತೋಟದಲ್ಲಿ ಅರಳಿ ನಿಂತ ಬಾದಾಮಿ ಮರ.

ಹೇಗಿದೆ ಈಗ?
ವಸಂತದ ಕನಸು ಬಿತ್ತು, ಎಂದೆ.
ಕೊಟ್ಟ ಮದ್ದುಗಳ ಅಮಲು,
ಮೈಯೆಲ್ಲ ಬಳ್ಳಿಯಂತೆ ಸುತ್ತಿದೆ ವೈರು, ಪೈಪುಗಳು,
ನರದೊಳಗೆ ಇಳಿಯುತಿರುವ ಹನಿಗಳು ಆತ್ಮವನ್ನು ತಂದು ಜೋಡಿಸಿದೆ ದೇಹಕ್ಕೆ
ನೋ ಪ್ರಾಬ್ಲಂ, ನೋ ಪ್ರಾಬ್ಲಂ
ಕರುಳು ಬಳ್ಳಿ ಹೆರೆದಾಗಿನ ನೋವಿದೆ ಅಷ್ಟೆ
ಜೀವ ಹೊರಬಂದು ಅರಳುತಿದೆ ಇಷ್ಟಿಷ್ಟೇ
ಟಿಕ್‌ ಟಿಕ್‌ ಗಡಿಯಾರದ ಸದ್ದು ಹೆಚ್ಚುತಿದೆ ಅಷ್ಟೆ

‍ಲೇಖಕರು Admin

November 1, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. prathibha nandakumar

    ಹೇಮಾ ಹೆಬ್ಬಗೋಡಿ ಅವರೇ ನನಗೆ ನೀವು ಮಾಡುವ ಅನುವಾದಗಳು ಮತ್ತು ನಿಮ್ಮ ಗದ್ಯ ಬರಹ ಬಹಳ ಇಷ್ಟ. ತುಂಬಾ ಚೆನ್ನಾಗಿ ಬರೀತೀರಿ.

    ಪ್ರತಿಕ್ರಿಯೆ
    • hema

      ನಮಸ್ತೆ ಮೇಡಂ

      ನಿಮ್ಮ ಸಹೃದಯ ಪ್ರತಿಕ್ರಿಯೆಗೆ ಥ್ಯಾಂಕ್ಯೂ ಮೇಡಂ.

      ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: