ಹೂ ನಗೆ ಬೊಗಸೆ ತುಂಬಿದೆ..

ನಾಗರಾಜ್ ಹರಪನಹಳ್ಳಿ 

ನಿನ್ನ ತುಟಿಗಳಲ್ಲಿ ಚೆಲ್ಲಿದ ಹೂ ನಗೆ
ನನ್ನ ಬೊಗಸೆ ತುಂಬಿದೆ
ಹಾಗಾಗಿ ನಗು ನನ್ನ ಎದೆ ತುಂಬಿದೆ

ನಿನ್ನ ಕಂಗಳ ಬೆಳಕು ಮಗ್ಗಲಲ್ಲಿದೆ
ಹಾಗಾಗಿ ರಾತ್ರಿಯೂ ಬೆಚ್ಚಗಿದೆ
ಅದನ್ನೇ ಜಗಕೆ ಹಂಚಿದೆ
ಜನ ಸುಖ ನಿದ್ದೆಗೆ ಜಾರಿದರು

ನಾನು ಮಾತ್ರ ನಿನ್ನದೇ ಧ್ಯಾನದಿ ಎಚ್ಚರದಲ್ಲಿರುವೆ

ನೀನು ಮಾತಾಡದೆಯೂ ಆಡಿದ
ಮಾತು ಆಲಿಸಿದೆ
ಅಲ್ಲಿ ಶತಮಾನಗಳ ನೋವು ,ಹತಾಶೆ ಹಂಬಲ, ತಳಮಳ  ದೊರೆತವು
ಅವುಗಳನ್ನು ದೇಶಗಳ ಸರಹದ್ದಿನಲಿ
ಹಂಚಿದೆ
ಹಾಗಾಗಿ ಎಲ್ಲ ಕಾಲದೇಶಗಳಲ್ಲೂ
ಅದೇ ತಲ್ಲಣ ಅದೇ ತವಕಗಳು
ಬೆಳೆಯುತ್ತಿವೆ

ನಿನ್ನ ಹೆಜ್ಜೆಯ ಸದ್ದಿಗೆ  ಭೂಮಿಯಾಗಿ
ಕಿವಿಗೊಟ್ಟೆ
ಗಜ್ಜೆಯ ಸಪ್ಪಳದ ಜೊತೆ
ಕನಸುಗಳು  ಸಿಕ್ಕವು
ಅವನ್ನೇ ಜಗಕೆ ಹಂಚಿದೆ , ಹಾಗಾಗಿ ಜನ ಕನಸು ಕಾಣುತ್ತಿದ್ದಾರೆ
ನಾನು ಮಾತ್ರ ವಿರಹಿಯಾಗಿದ್ದೇನೆ

ನಿನ್ನ ಬಿಂಕ ಬಳುಕು ಉತ್ಸಾಹವ
ಕಡ ತಂದು ಹಂಚಿದೆ
ಹಾಗಾಗಿ ನಗರದ ತುಂಬಾ ನಿನ್ನದೇ ಮಾತು
ನಾನು ಮಾತ್ರ ಒಬ್ಬಂಟಿಯಾಗಿ ದಂಡೆಯಲಿ ಅಲೆಯುತ್ತಿದ್ದೇನೆ

‍ಲೇಖಕರು avadhi

September 7, 2018

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: